ದ.ಕ., ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ಸದಸ್ಯರ, ಕ್ಷೇತ್ರವಾರು ಸಂಯೋಜಕರ ನೇಮಕ

Update: 2023-03-14 16:55 GMT

ಮಂಗಳೂರು :  ಮುಂಬರುವ ವಿಧಾನ ಸಭಾ ಚುನಾವಣೆಗೆ  ದ.ಕ ಮತ್ತು ಉಡುಪಿ  ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ಸದಸ್ಯರು ಮತ್ತು ವಿವಿಧ ವಿಧಾನ ಸಭಾ ಕ್ಷೇತ್ರಗಳಿಗೆ ಪ್ರಚಾರ ಸಮಿತಿ ಸಂಯೋಜಕರು ನೇಮಕ ಗೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ  ಸದಸ್ಯರಾಗಿ ಚಂದು ಎಲ್, ರಾಜಶೇಖರ್ ಶೆಟ್ಟಿ, ಜೆಸ್ಸಿ ಮಿನೇಜಸ್, ಸಜಿತ್ ಶೆಟ್ಟಿ, ಎಂ.ಜಿ.ಹೆಗ್ಡೆ, ರೂಪಾಚೇತನ್, ಮಂಜುಳಾ ನಾಯಕ್, ಸುಹೈಲ್ ಕಂದಕ್, ಯಶವಂತ ಪ್ರಭು, ಮಹಮ್ಮದ್ ಮುಸ್ತಫಾ ಹರೇಕಳ, ಸಾಯಿರ ಕೆ. ಝುಬೇರ್, ಮಹಮ್ಮದ್ ಬಡಗನ್ನೂರ್, ಕೃಷ್ಣಾ ಪ್ರಸಾದ್ ಆಳ್ವ, ಪ್ರಹ್ಲಾದ್ ಬಿ ಹಾಗೂ ಪಿ.ಪಿ. ವರ್ಗೀಸ್  ನೇಮಕಗೊಂಡಿದ್ದಾರೆ.

ಸುಳ್ಯಕ್ಕೆ ಸದಾನಂದ ಮಾವಂಜಿ, ಪುತ್ತೂರಿಗೆ ಭಾಸ್ಕರ್ ಗೌಡ ಕೋಡಿಂಬಾಳ, ಬೆಳ್ತಂಗಡಿಗೆ ಭಗೀರಥ ಜಿ, ಬಂಟ್ವಾಳಕ್ಕೆ  ಉಮೇಶ್ ನರಿಕೊಂಬು, ಮುಲ್ಕಿ ಮೂಡಬಿದ್ರಿಗೆ ಪ್ರಮೋದ್ ಕುಮಾರ್, ಮಂಗಳೂರು ಉತ್ತರಕ್ಕೆ ಗಿರೀಶ್ ಆಳ್ವ, ಮಂಗಳೂರು ದಕ್ಷಿಣಕ್ಕೆ ಟಿ.ಕೆ. ಸುಧೀರ್ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಚಂದ್ರಹಾಸ ಕರ್ಕೇರ ಅವರನ್ನು ಜಿಲ್ಲಾ ಪ್ರಚಾರ ಸಮಿತಿಯ ಸಂಯೋಜಕ ಭರತ್ ಮೋಡೋಡಿ ಶಿಫಾರಸಿನ ಮೇರೆಗೆ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್ ಅನುಮೋದನೆಯೊಂದಿಗೆ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ  ಸಹ ಅಧ್ಯಕ್ಷ ಮಂಜುನಾಥ ಭಂಡಾರಿ  ತಿಳಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಪ್ರಚಾರ ಸಮಿತಿಗೆ  ಜಿಲ್ಲಾ ಸಂಯೋಜಕರಾಗಿ ಐಡಾ ಗಿಲ್ಬರ್ಟ್ ಡಿ’ಸೋಜಾ ಮೂಡುಬೆಳ್ಳೆ, ಶ್ರೀಧರ್ ಕೆ.ಎಸ್ ಸಾಸ್ತಾನ, ಉದಯ್ ಕುಮಾರ್ ಪದವು, ಜ್ಯೋತಿ ನಾಯ್ಕ್ ಅಂಪಾರು ಹಾಗೂ ವಿಜಯ್ ಕುಮಾರ್ ಜೈನ್ ಈದು  ಅವರನ್ನು ನೇಮಿಸಲಾಗಿದೆ.

ಪ್ರಚಾರ ಸಮಿತಿಯ ಜಿಲ್ಲಾ ಜಂಟಿ ಸಂಯೋಜಕರಾಗಿ ಉಡುಪಿ ವಿಧಾನಸಭಾ ಕ್ಷೇತ್ರ- ಮೊಹಮ್ಮದ್ ರಫೀಕ್ ದೊಡ್ಡಣಗುಡ್ಡೆ, ಕಾಪು ವಿಧಾನಸಭಾ ಕ್ಷೇತ್ರ-ದಿನೇಶ್ ಸುವರ್ಣ ಶಿರ್ವ, ಕಾರ್ಕಳ - ಅನಿಲ್ ಪೂಜಾರಿ ಮಾಳ, ಕುಂದಾಪುರ - ಅನಿಲ್ ಶೆಟ್ಟಿ ಮಂದಾರ್ತಿ ಹಾಗೂ ಬೈಂದೂರು - ಅರವಿಂದ ಪೂಜಾರಿ ಬೈಂದೂರು ಇವರನ್ನು ನೇಮಿಸಲಾಗಿದೆ.

ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಸಂಯೋಜಕರಾಗಿ ಸುಪ್ರೀತ್ ಶೆಟ್ಟಿ ಕೆದಿಂಜೆ ಹಾಗೂ ಜಂಟಿ ಸಂಯೋಜಕರಾಗಿ ಶುಭದರಾವ್-ಕಾರ್ಕಳ, ಹೆಬ್ರಿ ಬ್ಲಾಕ್ ನವೀನ್ ಅಡ್ಯಂತಾಯ, ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಯೋಜಕರಾಗಿ ಪ್ರಕಾಶ್ಚಂದ್ರ  ಶೆಟ್ಟಿ, ಬೈಂದೂರು ಬ್ಲಾಕ್ ಜಂಟಿ ಸಂಯೋಜಕರಾಗಿ ಡಾ.ಸುಬ್ರಹ್ಮಣ್ಯ ಭಟ್, ವಂಡ್ಸೆ ಬ್ಲಾಕ್ ಜಂಟಿ ಸಂಯೋಜಕರಾಗಿ ಭಾಸ್ಕರ್ ನಾಯ್ಕ್ ಕರ್ಕುಂಜೆ, ಕುಂದಾಪುರ ವಿಧಾನಸಭಾಕ್ಷೇತ್ರಕ್ಕೆ ಸಂಯೋಜಕರಾಗಿ ಅಶೋಕ್ ಪೂಜಾರಿ ಬೀಜಾಡಿ, ಕುಂದಾಪುರ ಬ್ಲಾಕ್ ಜಂಟಿ ಸಂಯೋಜಕರಾಗಿ ಆಶಾ ಲೂವಿಸ್ ಕಾರ್ವಾಲೊ, ಕೋಟ ಬ್ಲಾಕ್ ಜಂಟಿ ಸಂಯೋಜಕರಾಗಿ ವಾಸುದೇವ ಕೋಟ್ಯಾನ್ ಐರೋಡಿ, ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಯೋಜಕರಾಗಿ ಕೃಷ್ಣಮೂರ್ತಿ ಆಚಾರ್ಯ, ಉಡುಪಿ ಬ್ಲಾಕ್ ಜಂಟಿ ಸಂಯೋಜಕರಾಗಿ ಪ್ರಶಾಂತ್ ಪೂಜಾರಿ, ಬ್ರಹ್ಮಾವರ ಬ್ಲಾಕ್ ಜಂಟಿ ಸಂಯೋಜಕರಾಗಿ ರಾಘವೇಂದ್ರ ಶೆಟ್ಟಿ ಕರ್ಜೆ, ಕಾಪು ವಿಧಾನಸಭಾ ಕ್ಷೇತ್ರಕ್ಕೆ  ಸಂಯೋಜಕರಾಗಿ ವಿಶ್ವಾಸ್ ಅಮೀನ್, ಕಾಪು ದಕ್ಷಿಣ ಬ್ಲಾಕ್ ಜಂಟಿ ಸಂಯೋಜಕರಾಗಿ ಜಿತೇಂದ್ರ ಪುಟಾರ್ಡೊ ಹಾಗೂ ಕಾಪು ಉತ್ತರ ಬ್ಲಾಕ್  ಜಂಟಿ ಸಂಯೋಜಕರಾಗಿ ಚರಣ್ ವಿಠಲ್ ಕುದಿ ಅವರನ್ನು ನೇಮಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ  ಸಹ ಅಧ್ಯಕ್ಷ ಮಂಜುನಾಥ ಭಂಡಾರಿ  ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Similar News