ಮಂಗಳೂರು | ಪಚ್ಚನಾಡಿಯಲ್ಲಿ ಬೆಂಕಿ ನಿಯಂತ್ರಣಕ್ಕೆ: ನಿವಾರಣೆಯಾಗದ ದಟ್ಟ ಹೊಗೆ

Update: 2023-03-15 10:24 GMT

ಮಂಗಳೂರು, ಮಾ.15: ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಸಂಭವಿಸಿದ ಬೆಂಕಿಯನ್ನು ಸತತ ಕಾರ್ಯಾಚರಣೆಯ ಮೂಲಕ ನಿಯಂತ್ರಣಕ್ಕೆ ತರಲಾಗಿದೆ. ಆದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾಗಿ ಆವರಿಸಿರುವ ಹೊಗೆ ಸಮಸ್ಯೆಯಾಗಿದೆ.

ಅಗ್ನಿಶಾಮಕ ದಳ ದಟ್ಟ ಹೊಗೆಯನ್ನು ನಿವಾರಿಸಲು ಶ್ರಮಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಸೋಮವಾರ ಮಧ್ಯಾಹ್ನ ಕಸದ ರಾಶಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿಯನ್ನು ಆದಷ್ಟು ಬೇಗ ತಹಬದಿಗೆ ತರಲಾಗಿದ್ದರೂ, ಬೆಂಕಿಯಿಂದ ಪ್ಲಾಸ್ಟಿಕ್ ಸುಟ್ಟು ಪರಿಸರದಲ್ಲಿ ದುರ್ವಾಸನೆ ಬರುತ್ತಿದೆ. ಈ ಹೊಗೆಯಿಂದ ಆ ಪ್ರದೇಶದಲ್ಲಿ ವಾಸಿಸುವ ಹಲವರಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಕಿ ಅವಘಡದಿಂದ ಪಚ್ಚನಾಡಿ, ಬೊಂದೇಲ್, ವಾಮಂಜೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ.

Similar News