ಪಜೀರ್: ಮಾ.19 - 20ಕ್ಕೆ ನೂರೆ ಅಜ್ಮೀರ್ ಕಾರ್ಯಕ್ರಮ

Update: 2023-03-17 10:01 GMT

ಉಳ್ಳಾಲ,ಮಾ.17: ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ವೈ.ಎಸ್ ಪಜೀರ್ ಶಾಖೆ ಇದರ 12 ನೇ ವಾರ್ಷಿಕೋತ್ಸವ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಉಪನ್ಯಾಸ , ಮಜ್ಲಿಸ್ ನ್ನೂರ್ ಮತ್ತು ನೂರೆ ಅಜ್ಮೀರ್ ಪ್ರಾರ್ಥನಾ ಸಂಗಮ ಕಾರ್ಯಕ್ರಮವು ಮಾ.19 ಹಾಗೂ 20 ರಂದು ಪಜೀರ್ ಜಂಕ್ಷನ್ ನಲ್ಲಿ ನಡೆಯಲಿದೆ ಎಂದು  ಕಾರ್ಯಕ್ರಮದ ಸಂಯೋಜಕ ಇಬ್ರಾಹಿಂ ಕೊಣಾಜೆ ತಿಳಿಸಿದ್ದಾರೆ.

ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.19 ರಂದು ಭಾನುವಾರ ಮಗ್ರಿಬ್ ನಮಾಝ್ ಬಳಿಕ  ಸೈಯ್ಯದ್ ತ್ವಾಹಾ ತಂಙಳ್ ಮೊಗ್ರಾಲ್ ರವರ ನೇತೃತ್ವದಲ್ಲಿ ಮಜ್ಲಿಸ್ ನ್ನೂರ್, ಯು.ಕೆ.ಹನೀಫ್ ನಿಝಾಮಿ ಯವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಮಾ.20 ರಂದು ಸೋಮವಾರ ರಾತ್ರಿ ವಲಿಯುದ್ದೀನ್ ಫೈಝಿ ಉಸ್ತಾದ್ ರವರ ನೇತೃತ್ವದಲ್ಲಿ ನೂರೆ ಅಜ್ಮೀರ್ ಪ್ರಾರ್ಥನಾ ಸಂಗಮ ಕಾರ್ಯಕ್ರಮವು ನಡೆಯಲಿದೆ ಎಂದರು.

ಕಾರ್ಯಕ್ರಮ ದಲ್ಲಿ ಪಜೀರ್ ಮಸೀದಿ ಖತೀಬ್ ಇಬ್ರಾಹಿಂ ದಾರಿಮಿ, ಸೆಯ್ಯದ್ ಬಾತಿಷ ತಂಙಳ್, ಹುಸೈನ್ ದಾರಿಮಿ ರೆಂಜಲಾಡಿ, ಇರ್ಶಾದ್ ದಾರಿಮಿ, ಅಬೂಸ್ವಾಲೀಹ್ ಫೈಝಿ, ಶಾಸಕ ಯು.ಟಿ ಖಾದರ್ ಸಹಿತ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಎಸ್ ವೈ ಎಸ್ ಮತ್ತು ಎಸ್ ಕೆ ಎಸ್ ಎಸ್ ಎಫ್ ಪಜೀರ್ ಶಾಖೆ ಗೌರವ ಅಧ್ಯಕ್ಷ ಖಾಸಿಂ ಬಾವಾ, ಎಸ್ ವೈ ಎಸ್ ಅಧ್ಯಕ್ಷ ಸಿ.ಎಚ್.ಮೊಯ್ದಿನ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಅಲಿ ಪಜೀರ್, ಮುಸ್ತಫಾ ಫೈಝಿ ಉಪಸ್ಥಿತರಿದ್ದರು.

Similar News