ಪೊಲೀಸ್ ದೌರ್ಜನ್ಯಕ್ಕೆ ಹಸುಳೆ ಬಲಿ: ಆರೋಪ

Update: 2023-03-23 04:46 GMT

ಬೊಕಾರೊ (ಜಾರ್ಖಂಡ್): ಜಾರ್ಖಂಡ್‌ನ ಗಿರಿಧ್ ಪ್ರದೇಶದ ಗ್ರಾಮವೊಂದರಲ್ಲಿ ಪೊಲೀಸರು ನಡೆಸಿದ ದಾಳಿಯ ವೇಳೆ ನಾಲ್ಕು ದಿನದ ಹಸುಳೆಯೊಂದು ಪೊಲೀಸರ ತುಳಿತಕ್ಕೆ ಒಳಗಾಗಿ ಮೃತಪಟ್ಟಿದೆ ಎಂದು ಆಪಾದಿಸಲಾಗಿದೆ.

ಹಲ್ಲೆ ಪ್ರಕರಣವೊಂದರ್ಲಿ ತಲೆ ಮರೆಸಿಕೊಂಡಿದ್ದ ಭೂಷಣ್ ಪಾಂಡೆ ಎಂಬಾತನನ್ನು ಬಂಧಿಸಲು ಪೊಲೀಸರು ತೆರಳಿದ್ದರು. "ಬಾಗಿಲು ಬಡಿದ ಸದ್ದು ಕೇಳಿಸಿತು. ಬಾಗಿಲು ತೆರೆದಾಗ ಪೊಲೀಸರು ಎನ್ನುವುದು ತಿಳಿದು ನಾವೆಲ್ಲ ಹೊರ ಬಂದೆವು. ಆದರೆ ನನ್ನ ಮಗ ಬೆಡ್‌ನಲ್ಲಿದ್ದ. ಪೊಲೀಸರು ಮನೆ ಶೋಧಿಸಿ ವಾಪಸ್ಸಾದರು. ನಾವು ಒಳ ಹೋಗಿ ನೋಡಿದಾಗ, ಶಿಶು ಮೃತಪಟ್ಟಿರುವುದು ಕಂಡುಬಂತು" ಎಂದು ಹಸುಳೆಯ ತಾಯಿ ವಿವರಿಸಿದ್ದಾರೆ.

"ಪೊಲೀಸರು ಮಗುವನ್ನು ಗಮನಿಸಿದ ಕಾರಣದಿಂದ ಪೊಲೀಸರ ಬೂಟಿನ ತುಳಿತಕ್ಕೆ ಸಿಕ್ಕಿ ಮಗು ಮೃತಪಟ್ಟಿದೆ" ಎಂದು ತಂದೆ ರಮೇಶ್ ಹೇಳಿದ್ದಾರೆ.

Similar News