ಮಧ್ಯಪ್ರದೇಶ: ಬಿಜೆಪಿ ನಾಯಕ ಯದ್ವೇಂದ್ರ ಸಿಂಗ್ ಯಾದವ್ ಕಾಂಗ್ರೆಸ್ ಗೆ ಸೇರ್ಪಡೆ

Update: 2023-03-23 05:29 GMT

ಭೋಪಾಲ್: ಮಧ್ಯಪ್ರದೇಶದ ಅಶೋಕ್ ನಗರದ ಬಿಜೆಪಿ ಮುಖಂಡ ಹಾಗೂ  ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾವ್ ಯದ್ವೇಂದ್ರ ಸಿಂಗ್ ಯಾದವ್ ಅವರು ಇಂದು ರಾಜ್ಯ ರಾಜಧಾನಿ ಭೋಪಾಲ್‌ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರಿದರು. ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ಹಾಗೂ  ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಅವರ ಸಮ್ಮುಖದಲ್ಲಿ ಯಾದವ್ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಿದರು.

"ಯಾವುದೇ ಪ್ರಚೋದನೆ ಮತ್ತು ಒತ್ತಡವಿಲ್ಲದೆ ಮಧ್ಯಪ್ರದೇಶದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಯಾದವ್ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದು ಸಂತೋಷದ ವಿಷಯ. ಯಾದವ್ ಅವರ ತಂದೆ ದೇಶರಾಜ್ ಯಾದವ್ ಅಶೋಕ್ ನಗರ ಜಿಲ್ಲೆಯ ಮುಂಗೋಲಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು ಎಂದು ಕಮಲ ನಾಥ್ ಹೇಳಿದರು.

.ಪಕ್ಷ ಸೇರಿದ  ಯಾದವ್ ಅವರು ದಿಗ್ವಿಜಯ ಸಿಂಗ್ ಹಾಗೂ  ಅವರ ಮಗ ಹಾಗೂ  ಮಾಜಿ ಸಚಿವ ಜೈವರ್ಧನ್ ಸಿಂಗ್ ಅವರನ್ನು ಅವರ ಮನೆಯಲ್ಲಿ ಭೇಟಿಯಾದರು.

Similar News