ಮಂಗಳೂರು: ಪ್ರತ್ಯೇಕ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

Update: 2023-03-23 14:19 GMT

ಮಂಗಳೂರು, ಮಾ.23: ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದ.ಕ., ಮಂಗಳೂರು ನಗರ, ಹಾಸನ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಡೆದ 10 ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ತಲಪಾಡಿಯ ಅಬ್ದುಲ್ ಅಝೀಝ್ (45) ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.‌

ಈತನ ವಿರುದ್ಧ ಕೊಣಾಜೆ ಠಾಣೆಯಲ್ಲಿ 4, ಉಳ್ಳಾಲ ಠಾಣೆಯಲ್ಲಿ 3, ಬಂಟ್ವಾಳ ಠಾಣೆಯಲ್ಲಿ 1, ಕೇರಳ ಕುಟ್ಯಾಡಿ ಠಾಣೆಯಲ್ಲಿ 1, ಹಾಸನ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.

ದ.ಕ., ಮಂಗಳೂರು ನಗರ, ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದ 23 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕಾಟಿಪಳ್ಳ-ಕೃಷ್ಣಾಪುರ ಅಝರುದ್ದೀನ್ (29) ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಕೊಣಾಜೆ, ಉಳ್ಳಾಲ, ಸುರತ್ಕಲ್, ಬಜ್ಪೆ, ಬರ್ಕೆ, ಬಂಟ್ವಾಳ, ಮಲ್ಪೆ, ಮೂಲ್ಕಿ, ಕಾರ್ಕಳ, ವಿಟ್ಲ, ಕಾಪು, ಮಣಿಪಾಲ, ಬಂಟ್ವಾಳ ನಗರ, ಮಂಗಳೂರು ಗ್ರಾಮಾಂತರ ಮತ್ತಿತರ ಕಡೆ ನಡೆದ ಪ್ರಕರಣಗಳಿಗೆ ಸಂಬಂಧಿಸಿ ಈತನ ವಿರುದ್ಧ ದೂರು ದಾಖಲಾಗಿತ್ತು.

Similar News