ವಾಲಿಬಾಲ್-ಕ್ರಿಕೆಟ್ ಪಂದ್ಯಕೂಟ, ವಿದ್ಯಾರ್ಥಿ ವೇತನ ವಿತರಣೆ

Update: 2023-03-25 11:48 GMT

ಕುಂದಾಪುರ: ಪಡುಕೋಣೆ ಎಜುಕೇಶನ್ ಮತ್ತು ಸ್ಪೋರ್ಟ್ಸ್ ಪ್ರಮೋಟರ್ಸ್‌ ವತಿಯಿಂದ ದಿವಂಗತ ಸುರೇಶ್ ಡಿ. ಪಡುಕೋಣೆ ಹಾಗೂ ದಿವಂಗತ ಪ್ರಭು ಆರ್ಥರ್ ಪೀರೇರಾ ಇವರ ಸ್ಮರಣಾರ್ಥ ವಾಲಿಬಾಲ್ ಹಾಗೂ ಕ್ರಿಕೆಟ್ ಪಂದ್ಯಕೂಟ ಮತ್ತು ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಪಡುಕೋಣೆ ಗ್ರೆಗರಿ ಪ್ರೌಢಶಾಲೆ ಮೈದಾನದಲ್ಲಿ ಇಂದು ನಡೆಯಿತು.                

ಸಮಾರಂಭವನ್ನು ಮುಂಬೈ ಉದ್ಯಮಿ ನಾಗರಾಜ್ ಪಡುಕೋಣೆ  ಉದ್ಘಾಟಿಸಿ ದರು. ಅಧ್ಯಕ್ಷತೆಯನ್ನು ಪಡುಕೋಣೆ ಇಗರ್ಜಿಯ ಧರ್ಮಗುರು ರೆ.ಫಾ. ಫ್ರಾನ್ಸಿಸ್ ಕರ್ನೆಲಿಯೋ ವಹಿಸಿದ್ದರು. ಬಾರ್ಕೂರು ಇಗರ್ಜಿಯ ಧರ್ಮ ಗುರುಗಳಾದ ರೆ.ಫಾ.ಫಿಲಿಪ್ ನೇರಿ ಆರನ್ಹಾ ಆಶೀರ್ವಚನ ನೀಡಿದರು.    

ಮುಖ್ಯ ಅತಿಥಿಗಳಾಗಿ ಮುಂಬೈ ಹೋಟೆಲ್ ಉದ್ಯಮಿ ಸುರೇಶ್ ಪೂಜಾರಿ, ನಾಡ ಗ್ರಾಪಂ ಅಧ್ಯಕ್ಷ ದಿನೇಶ್ ಶೆಟ್ಟಿ ಬಡಾಕೆರೆ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಫಿಲಿಪ್ ಡಿಸಿಲ್ವ, ಬೆಂಗಳೂರು ಹೋಟೆಲ್ ಉದ್ಯಮಿ ದಿನಕರ ಶೆಟ್ಟಿ, ಮುಂಬೈ ಉದ್ಯಮಿ ಒಸ್ವಲ್ಡ್ ಫ್ರಾನ್ಸಿಸ್ ಡಿಸೋಜ, ಹಾಸನ ಉದ್ಯಮಿ ಪ್ರತೀಶ್ ಕುಮಾರ್ ಶೆಟ್ಟಿ, ಬೆಂಗಳೂರು ಉದ್ಯಮಿ ಶಿವ ಪೂಜಾರಿ ಆನಗೋಡ, ಕುಸುಮಾ ನಾಗರಾಜ್ ಪಡುಕೋಣೆ, ಅನಂತ ಪೂಜಾರಿ ಉಪಸ್ಥಿತರಿದ್ದರು.            

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ನಾಗರಾಜ್ ಪಡುಕೋಣೆ, ವೆನಾನ್ಸಿಯಸ್ ಪಿರೇರಾ, ಸುರೇಶ ಪಡುಕೋಣೆ, ವಾಲಿಬಾಲ್ ಆಟಗಾರ ವಿನೀಶ್ ಡಿಸೋಜ, ಕುಸ್ತಿಪಟು ನಿಶ್ಚಲ್ ಡಿಸೋಜ ಅವರನ್ನು ಸನ್ಮಾನಿಸ ಲಾಯಿತು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಜೋಸೆಫ್ ಡಿಸಿಲ್ವ ಸ್ವಾಗತಿಸಿದರು. ಸ್ಮಿತಾ ಡಿಸೋಜ ಹಾಗೂ ಸರಿಟಾ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಅಲ್ಮೇಡಾ ವಂದಿಸಿದರು.

Similar News