ಬ್ರಹ್ಮಾವರ: ಕಾರು ಢಿಕ್ಕಿ; ಗೂಡ್ಸ್ ರಿಕ್ಷಾ ಚಾಲಕ ಮೃತ್ಯು

Update: 2023-03-27 14:02 GMT

ಬ್ರಹ್ಮಾವರ, ಮಾ.27: ಗೂಡ್ಸ್ ರಿಕ್ಷಾ- ಕಾರು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ನಿಂದ ಮುಂದೆ ಕೆನರಾ ಬ್ಯಾಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾ.27 ರಂದು ಬೆಳಗ್ಗೆ 11.20ರ ಸುಮಾರಿಗೆ ನಡೆದಿದೆ.

ಮೃತರನ್ನು ಕುಂದಾಪುರ ಕಂಡ್ಲೂರಿನ ಝೈನುಲ್ಲಾ ಅಬಿದಿನ್ (63) ಎಂದು ಗುರುತಿಸಲಾಗಿದೆ.

ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ರಿಕ್ಷಾ, ಯಾವುದೇ ಸೂಚನೆಯನ್ನು ನೀಡದೇ ಒಮ್ಮೇಲೆ ವಾಪಾಸ್ಸು ಆಕಾಶವಾಣಿ ಜಂಕ್ಷನ್ ಕಡೆಗೆ ಹೋಗಲು ತಿರುಗಿಸಿದ್ದು, ಈ ವೇಳೆ ಹಿಂದಿನಿಂದ ಬರುತ್ತಿದ್ದ ಕಾರು, ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಿಕ್ಷಾ ಚಾಲಕ ಝೈನುಲ್ಲಾ ಅಬಿದಿನ್ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದು ಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News