×
Ad

ಉಡುಪಿ : ಮಗನ ಮರಣದಿಂದ ನೊಂದ ತಾಯಿ ಆತ್ಮಹತ್ಯೆ

Update: 2023-03-27 20:55 IST

ಅಜೆಕಾರು, ಮಾ.27: ಅನಾರೋಗ್ಯದಿಂದ ಮೃತಪಟ್ಟ ಮಗನ ಚಿಂತೆಯಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.26ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆಯ ಸುಬ್ಬಣ್ಣ ನಾಯಕ್ ಎಂಬವರ ಪತ್ನಿ ರತ್ನಾವತಿ ನಾಯಕ್(85) ಎಂದು ಗುರುತಿಸಲಾಗಿದೆ.

ಇವರ ಕಿರಿಯ ಮಗ ಹರಿಶ್ಚಂದ್ರ ನಾಯಕ್ ಎಂಬವರು ಮಾ.26ರಂದು ಸಂಜೆ ವೇಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕಿರಿಯ ಮಗನ ಮೇಲೆ ಅತೀಯಾದ ಪ್ರೀತಿ ಹೊಂದಿದ್ದ ರತ್ನಾವತಿ, ಇದೇ ಚಿಂತೆಯಲ್ಲಿ ಮನನೊಂದು ಅದೇ ದಿನ ರಾತ್ರಿ ಮನೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News