ಮಹಾರಾಷ್ಟ್ರದಲ್ಲಿ ಸರಕಾರಿ ಪ್ರಾಯೋಜಿತ ಗಲಭೆ: ಸಂಜಯ್ ರಾವತ್ ಆರೋಪ

Update: 2023-03-31 06:46 GMT

ಮುಂಬೈ: ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಮಹಾರಾಷ್ಟ್ರದಲ್ಲಿ ಸರಕಾರ, ಪೊಲೀಸ್ ಹಾಗೂ  ಆಡಳಿತದ ಅನುಪಸ್ಥಿತಿಯೇ ಕಾರಣ ಎಂದು ರಾಜ್ಯಸಭಾ ಸಂಸದ ಹಾಗೂ  ಉದ್ಧವ್ ಸೇನಾ ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ. ಇವು ಸರಕಾರಿ ಪ್ರಾಯೋಜಿತ ಗಲಭೆಗಳಾಗಿವೆ ಎಂದು ಅವರು ದೂಷಿಸಿದರು.

''ಮಹಾರಾಷ್ಟ್ರದಲ್ಲಿ ಸರಕಾರ, ಪೊಲೀಸ್, ಗೃಹ ಸಚಿವರಿಲ್ಲದ ಕಾರಣ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿದೆ, ಸಿಎಂ, ಗೃಹ ಸಚಿವರು ಎಲ್ಲಿದ್ದಾರೆ? ಸಂಭಾಜಿನಗರದಲ್ಲಿ ಅ.2ರಂದು ಮಹಾವಿಕಾಸ ಅಘಾಡಿ ರ್ಯಾಲಿ ಇದ್ದ ಕಾರಣ ಅನಾವಶ್ಯಕ ಗಲಭೆ ನಡೆದಿದೆ. ಇದು ಸರಕಾರ ಪ್ರಾಯೋಜಿತ ಗಲಭೆ" ಎಂದು ರಾವುತ್  ಹೇಳಿದರು.

Similar News