ಕಾರ್ಕಳ: ನಿವೃತ್ತ ಶಿಕ್ಷಕ ಕೆರೆಗೆ ಬಿದ್ದು ಮೃತ್ಯು

Update: 2023-03-31 13:29 GMT

ಕಾರ್ಕಳ: ನಿವೃತ್ತ ಶಿಕ್ಷಕರೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ  ಬಿದ್ದು ಮೃತಪಟ್ಟ ಘಟನೆ ಮಾ.30ರಂದು ಬೆಳಗ್ಗೆ ಮುಡಾರು ಗ್ರಾಮದ ಬಜಗೊಳಿಯ ಕಲ್ಲಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಬಜಗೊಳಿಯ ಕಲ್ಲಟ್ಟೆಯ ನಿವೃತ್ತ ಶಿಕ್ಷಕ ನರಸಿಂಹ ಭಟ್ (67) ಎಂದು ಗುರುತಿಸಲಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಮನೆಯ ಸಮಿಪದ ತೋಟದ ಕೆರೆಯ ನೀರಿನ ಮಟ್ಟ ನೋಡಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News