ಮಂಜೇಶ್ವರ: ಎ.2ರಿಂದ `ರಮಳಾನ್ ಪ್ರಭಾಷಣ' ಸಿಂಸಾರುಲ್ ಹಕ್ ಹುದವಿ ಚಾಲನೆ

Update: 2023-04-01 18:20 GMT

ಮಂಜೇಶ್ವರ: ಎಸ್ಕೆಎಸ್ಸೆಸ್ಸೆಫ್ ಮಂಜೇಶ್ವರ ವಲಯ ಇದರ ವತಿಯಿಂದ 9ನೇ `ರಮಳಾನ್ ಪ್ರಭಾಷಣ' ಕಾರ್ಯಕ್ರಮವು ಎ.2ರಿಂದ 5ರವರೆಗೆ ನಡೆಯಲಿದೆ. 

ಎ.2ರಂದು  ಸಯ್ಯದ್ ಅತ್ತಾವುಲ್ಲಾ ತಂಙಳ್ (ಎಂ.ಎ ಉದ್ಯಾವರ್) ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಭಾಷಣಗಾರ ಸಿಂಸಾರುಲ್ ಹಕ್ ಹುದವಿ, ಎ.3ರಂದು ಖಲೀಲ್ ಹುದವಿ ಕಲ್ಲಾಯಂ, ಎ.4ರಂದು ಸಾಜಿಹ್ ಶಮೀರ್ ಅಲ್ ಅಝ್ಹರಿ ಮಲಪ್ಪುರಂ, ಎ.5ರಂದು ಹನೀಫ್ ನಿಝಾಮಿ ಅವರು ಮುಖ್ಯ ಪ್ರಭಾಷಣಗೈಯಲಿದ್ದಾರೆ.

ಎ.5ರಂದು ಪೂರ್ವಾಹ್ನ 11:30ರಿಂದ ನಡೆಯಲಿರುವ `ಮಜ್ಲಿಸುನ್ನೂರ್'ಗೆ ಸಯ್ಯದ್ ಇಬ್ರಾಹಿಂ ಬಾತಿಷಾ ತಂಙಳ್ ಆನೆಕಲ್ಲು ನೇತೃತ್ವ ನೀಡಲಿದ್ದಾರೆ. ಪ್ರಭಾಷಣಗಳು ಪೂರ್ವಾಹ್ನ 9:30ಯಿಂದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Similar News