ಸೋನಿಪತ್‌: ಮಸೀದಿಯಲ್ಲಿ ದಾಂಧಲೆಗೈದು ಪ್ರಾರ್ಥನಾ ನಿರತರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು

Update: 2023-04-10 05:49 GMT

ಚಂಡೀಗಢ: ಹರ್ಯಾಣಾದ ಸೋನಿಪತ್‌ ಜಿಲ್ಲೆಯ ಸಂಡಲ್‌ ಕಲನ್‌ ಎಂಬ ಗ್ರಾಮದಲ್ಲಿ ಸುಮಾರು 20 ಜನರ ಗುಂಪೊಂದು ಮಸೀದಿಯಲ್ಲಿ ದಾಂಧಲೆಗೈದು ಅಲ್ಲಿ ನಮಾಝ್ ಮಾಡುತ್ತಿದ್ದವರ ಮೇಲೆ ರವಿವಾರ ದಾಳಿ ನಡೆಸಿದೆ. ಘಟನೆಯಲ್ಲಿ ಸುಮಾರು ಒಂಬತ್ತು ಮಂದಿಗೆ ಗಾಯಗಳಾಗಿವೆ.  ದುಷ್ಕರ್ಮಿಗಳು ಅದೇ ಗ್ರಾಮದವರು ಎಂದು ತಿಳಿದು ಬಂದಿದೆ ಎಂದು indiatoday.in ವರದಿ ಮಾಡಿದೆ.

ಲಾಠಿ ಹಿಡಿದುಕೊಂಡು ಮಸೀದಿಗೆ ನುಗ್ಗಿದ ಗುಂಪು ಗ್ರಾಮದಲ್ಲಿನ ಈ ಸಣ್ಣ ಮಸೀದಿಗೆ ನುಗ್ಗಿ ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ದಾಳಿ ನಡೆಸಿದೆ. ಇದೇ ದುಷ್ಕರ್ಮಿಗಳ ತಂಡ ಗ್ರಾಮದ ರಸ್ತೆಗಳಲ್ಲಿ ಕೈಗಳಲ್ಲಿ ಲಾಠಿ ಹಿಡಿದುಕೊಂಡು ಅಡ್ಡಾಡುತ್ತಿರುವ ಚಿತ್ರಗಳು ಹರಿದಾಡುತ್ತಿವೆ ಎಂದು ವರದಿಯಾಗಿದೆ.

ಈ ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಪೊಲೀಸರು 19 ಮಂದಿಯ ಮೇಲೆ ಎಫ್‌ಐಆರ್‌ ದಾಖಲಿಸಿದ್ದು ಇಲ್ಲಿಯ ತನಕ 16 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Similar News