ಹೊಳೆಯಲ್ಲಿ ಮುಳುಗಿ ಮೃತ್ಯು

Update: 2023-04-16 15:20 GMT

ಅಜೆಕಾರು, ಎ.16: ಬಲೆ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಎ.15ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಮಂಗಳ ನಗರದ ನಿವಾಸಿ ಚಂದ್ರ ದೇವಾಡಿಗ (55) ಎಂದು ಗುರುತಿಸಲಾಗಿದೆ. ಇವರು ಇತರರೊಂದಿಗೆ ಮೀನು ಹಿಡಿಯಲು ಮದಿಮಲು ಗುಂಡಿಗೆ ಹೋಗಿದ್ದು, ಅಲ್ಲಿ ಹೊಳೆಗೆ ಹಾಕಿದ ಬಲೆಯನ್ನು ನೋಡಲು ಚಂದ್ರ ದೇವಾಡಿಗರು ಹೋಗಿದ್ದರು. ಈ ವೇಳೆ ಅವರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾದರು. ನಂತರ ಮುಳುಗು ತಜ್ಞರು ಆಗಮಿಸಿದ ನೀರಿನ ಗುಂಡಿಯಲ್ಲಿ ಮುಳುಗಿ ಮೃತಪಟ್ಟ ಚಂದ್ರ ದೇವಾಡಿಗರ ಮೃತದೇಹವನ್ನು ಮೇಲಕ್ಕೆ ಎತ್ತಲಾಯಿತು.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News