ಜಿದ್ದಾ: ಅಬ್ದುಲ್ ಶಕೀಲ್ ಟ್ರಸ್ಟ್‌ನಿಂದ ಕಿರಾಅತ್ ಸ್ಪರ್ಧೆ

Update: 2023-04-18 16:39 GMT

ಜಿದ್ದಾ, ಎ.18: ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಇಫ್ತಾರ್ ಕೂಟ ಹಾಗೂ ಕಿರಾಅತ್ ಸ್ಪರ್ಧೆಯು ಸೌದಿ ಅರೇಬಿಯಾದ ಜಿದ್ದಾದ ‘ದಿ ವಿಲೇಜ್ ರೆಸ್ಟೋರೆಂಟ್’ನಲ್ಲಿ ನಡೆಯಿತು.

ಕಿರಾಅತ್ ಸ್ಪರ್ಧೆಯಲ್ಲಿ ಅಹ್ಮದ್ ಸಿರಾಜ್ ಶ್ರೀಲಂಕಾ (ಪ್ರಥಮ), ಅಹ್ಮದ್ ಶಯೀದ್ (ದ್ವೀತಿಯ), ನದೀಮ್ ನೂರಿಷಾ ಕೇರಳ (ತೃತೀಯ), ಮುಹಮ್ಮದ್ ಮಿಸ್ಬಾ ಹುಸೈನ್ ಕರ್ನಾಟಕ (ನಾಲ್ಕನೆ), ಮುಹಮ್ಮದ್ ಶೀಝ್ ಕೇರಳ (ಐದನೇ ಸ್ಥಾನ) ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಇಬ್ರಾಹಿಂ ದೇರಳಕಟ್ಟೆ, ಖಮರ್ ಸಾದ, ಕೆ.ಟಿ. ಮುನೀರ್, ಶಹೂದ್, ಫಯಾಝ್, ಹಬೀಬ್ ತಾಹಿರ್, ರಯ್ಯೆನ್ ಹಸ್ಮಿ, ಇಸ್ಮಾಯಿಲ್ ತಂಙಳ್, ಸಾದಿಕ್ ಪುತ್ತಬ್ಬಾ, ಝಮೀರ್ ಅಬ್ದುಲ್ ರಹ್ಮಾನ್, ಅಬ್ಬಾಸ್ ಉಚ್ಚಿಲ್ ಉಪಸ್ಥಿತರಿದ್ದರು.

ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಧ್ಯಕ್ಷ ಅಬ್ದುಲ್ ಶಕೀಲ್ ಸ್ವಾಗತಿಸಿದರು. ಉದ್ಯಮಿ ಝೈನುದ್ದೀನ್ ಮುನ್ನೂರು ವಂದಿಸಿದರು.

Similar News