ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2023-04-20 16:38 GMT

ಹಿರಿಯಡ್ಕ : ವಿಪರೀತ ಮದ್ಯಪಾನದ ಚಟವನ್ನು ಹೊಂದಿದ್ದ ರಾಜೀವ ಕುಲಾಲ್(55) ಎಂಬವರು ಮದ್ಯಪಾನ ಬಿಡಲಾಗದೇ ಮಾನಸಿಕವಾಗಿ ನೊಂದು ಎ.16ರಂದು ರಾತ್ರಿಯಿಂದ ಎ.19ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕಟ್ಟೆ ಎಂಬಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಚಿಕ್ಕ ವಯಸ್ಸಿನಲ್ಲಿಯೇ ತನ್ನ ಎರಡೂ ಕಾಲುಗಳನ್ನು ಕಳೆದುಕೊಡು ಕೃತಕ ಕಾಲುಗಳನ್ನು ಜೋಡಿಸಿ ಕೊಂಡಿದ್ದ ಸದಾನಂದ ಅಮೀನ್(54) ಎಂಬವರು ಮಗನ ಅನಾರೋಗ್ಯದಿಂದ ಜೀವನದಲ್ಲಿ ನೊಂದು ಎ.20ರಂದು ಬೆಳಗ್ಗೆ ಬೀಡು ಮಾರ್ಗದಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News