ಕೆಕೆಆರ್ ವಿರುದ್ಧ ಪಂದ್ಯದ ನಂತರ ವಿದಾಯದ ಸುಳಿವು ನೀಡಿದ ಎಂ.ಎಸ್. ಧೋನಿ

Update: 2023-04-24 06:36 GMT

ಮುಂಬೈ: ತನ್ನ 41 ನೇ ವಯಸ್ಸಿನಲ್ಲಿಯೂ ಕೂಡ ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್  ಪಾಲಿಗೆ ಮೈದಾನದಲ್ಲಿ ಆಸ್ತಿಯಾಗಿಯೇ ಉಳಿದಿದ್ದಾರೆ. ರವಿವಾರ ನಡೆದ  ಲೀಗ್ ಪಂದ್ಯದಲ್ಲಿ 4 ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅನ್ನು ಸೋಲಿಸಿದ ನಂತರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಮೈದಾನದಲ್ಲಿ ಬ್ಯಾಟ್‌ ನಲ್ಲಿ  ಹೆಚ್ಚಿನ ಕೊಡುಗೆ ನೀಡಲು ಧೋನಿಗೆ ಸಮಯ ಸಿಗದಿದ್ದರೂ, ಅವರು ನಾಯಕ ಹಾಗೂ  ವಿಕೆಟ್‌ಕೀಪರ್ ಆಗಿ ಭಾರೀ  ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾದರು. ಪಂದ್ಯದ ಮುಕ್ತಾಯದ ನಂತರ ಧೋನಿ ನೀಡಿದ ಹೇಳಿಕೆಯು  ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.

ಐಪಿಎಲ್‌ನಲ್ಲಿ ಆಟಗಾರನಾಗಿ ಇದು ಧೋನಿ ಅವರ ಕೊನೆಯ ಸೀಸನ್‌ ಆಗಿರುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲವಾದರೂ, ಧೋನಿ ' ಖಂಡಿತವಾಗಿಯೂ ವಿದಾಯದ ಸಣ್ಣ ಸುಳಿವು ನೀಡಿದ್ದಾರೆ.

 ಕೆಲವು ದಿನಗಳ ಹಿಂದೆ ಇದು ತಮ್ಮ ವೃತ್ತಿಜೀವನದ ಕೊನೆಯ ಹಂತ ಎಂದು ಒಪ್ಪಿಕೊಂಡ ನಂತರ, ಧೋನಿ ಅವರು ಕೆಕೆಆರ್ ವಿರುದ್ಧದ ಪಂದ್ಯದ ನಂತರ 'ವಿದಾಯ' ದ ಮಾತು ಆಡಿದ್ದಾರೆ.

" ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನನ್ನು  ಬೆಂಬಲಿಸಿದ್ದಕ್ಕಾಗಿ ಧನ್ಯವಾದ ಹೇಳುತ್ತೇನೆ.  ಸ್ಟೇಡಿಯಮ್ ನಲ್ಲಿರುವ  ಹೆಚ್ಚಿನವರು ಮುಂದಿನ ಬಾರಿ KKR ಜೆರ್ಸಿಯಲ್ಲಿ ಬರುತ್ತಾರೆ. ಅವರು ನನಗೆ ವಿದಾಯ ನೀಡಲು ಪ್ರಯತ್ನಿಸುತ್ತಿದ್ದಾರೆ, ಆದ್ದರಿಂದ ಪ್ರೇಕ್ಷಕರಿಗೆ ತುಂಬಾ ಧನ್ಯವಾದಗಳು" ಎಂದು ಪಂದ್ಯದ ನಂತರ ಧೋನಿ ಹೇಳಿದ್ದಾರೆ.

Similar News