ಮೇ6ರ ಸಂಜೆಯಿಂದ ಮೇ8ರವರೆಗೆ ಕುಂಜತ್ತೂರು ಮಾಡ ಪರಿಸರದಲ್ಲಿ ನಿಷೇಧಾಜ್ಞೆ: ಡಿಸಿ ಭಂಡಾರಿ ಸ್ವಾಗತ್

Update: 2023-05-06 16:35 GMT

ಕಾಸರಗೋಡು: ಮಂಜೇಶ್ವರ ಠಾಣೆ ವ್ಯಾಪ್ತಿಯ ಕುಂಜತ್ತೂರು ಮಾಡ ಪರಿಸರದಲ್ಲಿ  ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಆದೇಶ ನೀಡಿದ್ದಾರೆ.

ಮಾಡ ದೇವಸ್ಥಾನ ಸಮೀಪದ ಸ್ಮಶಾನ ಸ್ಥಳ ಹಾಗೂ ರಸ್ತೆಗೆ ಸಂಬಂಧಪಟ್ಟಂತೆ  ಅಹಿತಕರ ಘಟನೆಗೆ ಸಾಧ್ಯತೆ ಬಗ್ಗೆ ಲಭಿಸಿದ ವರದಿಯಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಮೇ 6ರ ಸಂಜೆ 7 ಗಂಟೆಯಿಂದ ಮೇ 8ರ ಸಂಜೆ 7 ಗಂಟೆ ತನಕ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಕೋವಿ ಸೇರಿದಂತೆ ಮಾರಕಾಸ್ತ್ರ ಕೊಂಡೊಯ್ಯುವುದು, ಬಹಿರಂಗ ಘೋಷಣೆ ಕೂಗುವುದು, ಧ್ವನಿ ವರ್ಧಕ ಬಳಕೆ, ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಪ್ರತಿಭಟನೆ, ಮೆರವಣಿಗೆ, ಸಮಾವೇಶಗಳನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Similar News