ಕುಸಿದು ಬಿದ್ದು ಯುವಕ ಮೃತ್ಯು

Update: 2023-05-16 15:04 GMT

ಅಜೆಕಾರು, ಮೇ 16: ಮನೆಯ ಹತ್ತಿರ ಇರುವ ಸರಕಾರಿ ಜಮೀನಿನಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮರ್ಣೆ ಗ್ರಾಮದ ನೀರಲ್ಕೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ಮರ್ಣೆ ಗ್ರಾಮದ ನೀರಲ್ಕೆಯ ಶೇಖರ ಮೇರ(37) ಎಂದು ಗುರುತಿಸಲಾಗಿದೆ.

ವೀಪರೀತ ಮದ್ಯಪಾನ ಮಾಡುವ ಹವ್ಯಾಸ ಹೊಂದಿದ್ದ ಇವರು, ಅಸೌಖ್ಯದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News