ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರಮಾಣವಚನ: ಉಡುಪಿಯಲ್ಲಿ ಸಂಭ್ರಮಾಚರಣೆ

Update: 2023-05-20 08:54 GMT

ಉಡುಪಿ, ಮೇ 20: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಡುಪಿ ಕಾಂಗ್ರೆಸ್ ಭವನದ ಮುಂಭಾಗ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಬಿ.ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಹರೀಶ್ ಶೆಟ್ಟಿ ಪಾಂಗಾಳ, ಶಬೀರ್ ಅಹ್ಮದ್, ನವೀನ್ ಶೆಟ್ಟಿ, ಯುವರಾಜ್, ಸಾಯಿರಾಜ್, ಸತೀಶ್ ಮಂಚಿ, ಆನಂದ ಪೂಜಾರಿ ಕಿದಿಯೂರು, ಜಿತೇಶ್ ಕುಮಾರ್, ಸುರೇಶ್ ಶೆಟ್ಟಿ ಬನ್ನಂಜೆ, ಸಂಜೀವ ಕಾಂಚನ್, ಸೌರವ್ ಬಲ್ಲಾಳ್, ಸುರೇಂದ್ರ ಆಚಾರ್ಯ, ಶರತ್ ಶೆಟ್ಟಿ, ಮಹೇಶ್ ಮಲ್ವೆ, ಹಸನ್ ಅಜ್ಜರಕಾಡು, ಉಪೇಂದ್ರ, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.

ವಕೀಲರಿಂದ ಸಂಭ್ರಮ: ಇದೇ ಸಂದರ್ಭದಲ್ಲಿ ಉಡುಪಿ ಕೋರ್ಟ್ ಆವರಣದಲ್ಲಿ ಸಿದ್ಧರಾಮಯ್ಯ ಅಭಿಮಾನಿ ವಕೀಲರು ಐಸ್‌ಕ್ರೀಮ್ ವಿತರಿಸಿ ಸಂಭ್ರಮಿಸಿದರು.

Similar News