ಮೇ 28ರಂದು ಕುಂದಾಪುರ ತಾಲೂಕು ಮಟ್ಟದ ಕವಿಗೋಷ್ಠಿ ‘ಮೇ ತಿಂಗಳ ಓದು’

Update: 2023-05-26 13:49 GMT

ಕುಂದಾಪುರ, ಮೇ 26:  ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಹಾಗೂ ಜೆ.ಸಿ.ಐ. ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ‘ಮೇ ತಿಂಗಳ ಓದು’ ಅವಿಭಜಿತ ಕುಂದಾಪುರ ತಾಲೂಕು ಮಟ್ಟದ ಕವಿಗೋಷ್ಠಿಯು ಮೇ 28ರಂದು ಕುಂದಾಪುರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಜೆ.ಸಿ.ಐ. ಭವನದಲ್ಲಿ ನಡೆಯಲಿದೆ.

ವಿಲ್ಸನ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ರೇಖಾ ಬನ್ನಾಡಿ, ರಾಮಕೃಷ್ಣ ಹೇರ್ಳೆ, ಸುಧಾ ಅಡುಕಳ, ಅಭಿಲಾಷಾ ಹಂದೆ, ಅಬ್ದುಲ್ ರವೂಫ್ ಇವರ ವಿಶೇಷ ಉಪಸ್ಥಿತಿಯಲ್ಲಿ ಈ ಕವಿಗೋಷ್ಠಿಯು ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಂಕರ ಕೆಂಚನೂರು, ಶಶಿಧರ ಹೆಮ್ಮಾಡಿ, ಉದಯ ಗಾಂವಕರ್, ಸಂತೋಷ ಗುಡ್ಡಿಯಂಗಡಿ, ವಿಜಯಶ್ರೀ ಹಾಲಾಡಿ, ಸಂಪೂರ್ಣಾನಂದ ಬಳ್ಳೂರು, ಜಯಲಕ್ಷ್ಮಿ ಸತೀಶ್, ಶರತ್ ಶೆಟ್ಟಿ ವಂಡ್ಸೆ, ಸಚಿನ್ ಅಂಕೋಲ, ವಿಜಯಕುಮಾರ ಕುಂಭಾಶಿ, ಮಂಜುನಾಥ್ ಚಾಂದ್, ರಾಮು ಯು. ಸಿರಿಗೆರೆ, ಉಪ್ಪಿನಕುದ್ರು, ಸುಜಿತ್ ಕಾರ್ಕಳ, ರೇವತಿ ರಾಮ್, ಶ್ರೀಕಲಾ ಅಮರೇಶ ಶೆಟ್ಟಿಗಾರ, ವಿನಯಾ ಕೌಂಜೂರು, ಮಂಜುನಾಥ ಮಧ್ಯಸ್ಥ, ಲೋಲಾಕ್ಷಿ ಮರವಂತೆ, ಗಣೇಶ ಭಟ್, ರಾಘವೇಂದ್ರ ಡಿ. ಆಲೂರು, ದಿಶಾ ಗುಲ್ವಾಡಿ, ಅಶೋಕ ತೆಕ್ಕಟ್ಟೆ, ಸಿಂಧೂ ಎಚ್. ಐತಾಳ, ಮಹಾಬಲ ಕೆ. ಮರವಂತೆ ಮುಂತಾದ ಕವಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

Similar News