ಮಂಗಳೂರು: ದೂರುದಾರರಿಗೆ ಜೀವ ಬೆದರಿಕೆ

Update: 2023-05-29 15:36 GMT

ಮಂಗಳೂರು, ಮೇ 29: ಬಾವುಟ ತೆಗೆದುದರ ವಿರುದ್ಧ ದೂರು ನೀಡಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ದೂರುದಾರರಿಗೆ ಜೀವ ಬೆದರಿಕೆಯೊಡ್ಡಿದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃತ್ತಿಯಲ್ಲಿ ಚಾಲಕನಾಗಿರುವ ಸಂದೀಪ್ ಕುದ್ಕೋರಿಗುಡ್ಡೆ ಮೇ 26ರಂದು ಸಂಜೆ ತನ್ನ ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಜಗದೀಶ್ ಎಂಬಾತ ತಡೆದು ನಿಲ್ಲಿಸಿ ‘ಬಾವುಟ ತೆಗೆದ ಬಗ್ಗೆ ನನ್ನ ವಿರುದ್ಧ ದೂರು ನೀಡುತ್ತೀಯಾ?’ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ಬೈದು ‘ಇನ್ನು ಮುಂದೆ ದೂರು ನೀಡಿದರೆ ಕೊಲ್ಲದೆ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News