ಜೂ.3ರಂದು ಭವಿಷ್ಯ ನಿಧಿ ಪಿಂಚಣಿದಾರರ ಸಮಾವೇಶ

Update: 2023-06-02 12:32 GMT

ಉಡುಪಿ, ಜೂ.2: ಪಿಂಚಣಿದಾರರ ಸಂಘದ ಉಡುಪಿ ವಲಯದ ವತಿಯಿಂದ ಭವಿಷ್ಯ ನಿಧಿ ಪಿಂಚಣಿದಾರರ ಸಮಾವೇಶವನ್ನು ಜೂ.3ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಬನ್ನಂಜೆ ಶ್ರೀ ನಾರಾಯಣಗುರು ಸಭಾಂಗಣ ದಲ್ಲಿ ಆಯೋಜಿಸಲಾಗಿದೆ.

ಸಮಾವೇಶವನ್ನು ಪಿಂಚಣಿದಾರ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಸುಕುಮರ್ ಉದ್ಘಾಟಿಸಲಿರು ವರು. ಮುಖ್ಯ ಅತಿಥಿಗಳಾಗಿ ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ, ಜಿಲ್ಲಾ ಮುಖಂಡರಾದ ಎಚ್.ನರಸಿಂಹ, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ ಭಾಗವಹಿಸಲಿದ್ದಾರೆ.

ಭವಿಷ್ಯ ನಿಧಿ ಪಿಂಚಣಿ ದಾರರಿಗೆ ಕನಿಷ್ಟ ಪಿಂಚಣಿ ರೂ6000ಕ್ಕೆ ಹೆಚ್ಚಿಸಬೇಕು. ಪಿಂಚಣಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸರಳಗೊಳಿಸುವುದು. ಪ್ರತಿ ವರ್ಷ ಬೆಲೆ ಏರಿಕೆ ಆಧಾರದಲ್ಲಿ ಹೆಚ್ಚಾಗುವ ತುಟ್ಟಭತ್ಯೆ ಯನ್ನು ಭವಿಷ್ಯನಿಧಿ ಪಿಂಚಣಿದಾರರಿಗೂಕೊಡುವಂತೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದು ಸಂಘದ ಉಡುಪಿ ವಲಯ ಕಾರ್ಯದರ್ಶಿ ಉಮೇಶ್ ಕುಂದರ್ ಪ್ರತಿಕಾ ಹೇಳಿಕೆ ಮೂಲಕ ವಿನಂತಿಸಿಕೊಂಡಿದ್ದಾರೆ.

Similar News