ಮಿತ್ತೂರು ಕೆಜಿಎನ್ ಸಾಯನ್ಸ್ ಕ್ಲಬ್ : ವಿಶ್ವ ಪರಿಸರ ದಿನಾಚರಣೆ

Update: 2023-06-06 17:21 GMT

ವಿಟ್ಲ: ಮಾಣಿ ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಕೆಜಿಎನ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ  ವತಿಯಿಂದ ಕ್ಯಾಂಪಸ್ ಗಾರ್ಡನ್ ನಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯ್ತು. 

ಕೆಜಿಎನ್ ವಾಣಿಜ್ಯ ಉಪನ್ಯಾಸಕ ರಿಝ್ವಾನ್ ಬೆಳ್ಮ ಗಿಡಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.  ಕೆಜಿಎನ್ ಪಿಯು ಕಾಲೇಜು ಪ್ರಾಂಶುಪಾಲ ಮುಹಮ್ಮದ್ ಫಾರೂಖ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಸಾಬಿತ್ ಮು‌ಈನಿ ಅಸ್ಸಖಾಫಿ ಸರಳಿಕಟ್ಟೆ ದಿಕ್ಸೂಚಿ ಭಾಷಣ ಮಾಡಿದರು. 

ವಿದ್ಯಾರ್ಥಿಗಳಿಂದ ಸ್ವರಚಿತ ಬಹುಭಾಷಾ  ಪರಿಸರ ಜಾಗೃತಿ ಹಾಡು ಏರ್ಪಡಿಸಲಾಗಿತ್ತು.‌ ವಿಜ್ಞಾನದ ವಿಭಾಗದ ಉಪನ್ಯಾಸಕರಾದ  ನಲ್ಸನ್ ಪ್ರಶಾಂತ್ ಡಿಸೋಜ ಸ್ವಾಗತಿಸಿ, ಮುಹಮ್ಮದ್ ಇಸ್ತಿಕಾರ್ ಕಾರ್ಯಕ್ರಮ ನಿರೂಪಿಸಿದರು.

Similar News