ಕಾಸರಗೋಡು: ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನಾಚರಣೆ

► ಭಾರತ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಸವಿನೆನಪಿಗಾಗಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ

Update: 2023-06-08 09:07 GMT

ಕಾಸರಗೋಡು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ  , ಮಂಗಳೂರು ಮಂಜುನಾಥ್ ಎಜುಕೇಷನ್ ಟ್ರಸ್ಟ್ ಇವರ ಸಹಯೋಗದಲ್ಲಿ  ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನಾಚರಣೆ  ಮತ್ತು ಭಾರತ ಸ್ವಾತಂತ್ರೋತ್ಸವ ಅಮೃತ  ಮಹೋತ್ಸವದ ಸವಿನೆನಪಿಗಾಗಿ ಗಡಿನಾಡಿನಲ್ಲಿ ಕನ್ನಡ  ಜಾಗೃತಿ  ಸಾಂಸ್ಕೃತಿಕ ಉತ್ಸವ ಕಯ್ಯಾರು ಜೋಡುಕಲ್ಲು ಶ್ರೀ  ರಾಮ  ಕೃಷ್ಣ  ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಗುರುವಾರ ಆಯೋಜಿಸಲಾಯಿತು.


ಕರ್ನಾಟಕ  ಕನ್ನಡ ಮತ್ತು ಸಂಸ್ಕೃತಿ ಇಲಾಖಾ ನಿರ್ದೇಶಕ  ವಿಶ್ವನಾಥ ಹಿರೇಮಠ ಉದ್ಘಾಟಿಸಿದರು . ಗಡಿನಾಡು ಕಾಸರಗೋಡಿನ ನೆಲದಲ್ಲಿ ನಡೆಯುವ  ಕನ್ನಡ ಸಂಸ್ಕೃತಿ  ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು .
 

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ  ಅಧ್ಯಕ್ಷ  ಡಾ. ಸಿ.ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ ಮಂಜುನಾಥ್ ಸ್ವಾಗತಿಸಿ, ಸಂಧ್ಯಾ ಗೀತ ವಂದಿಸಿದರು.

Similar News