ಅನಾರೋಗ್ಯದಿಂದ ಉಚ್ಚಿಲದ ಯುವಕ ಮೃತ್ಯು

Update: 2023-06-09 15:09 GMT

ಪಡುಬಿದ್ರಿ, ಜೂ.9: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ  ಘಟನೆ ಉಚ್ಚಿಲ ಮುಳ್ಳಗುಡ್ಡೆ ಎಂಬಲ್ಲಿ ನಡೆದಿದೆ.

ಮೃತರನ್ನು ಉಚ್ಚಿಲ ಮುಳ್ಳಗುಡ್ಡೆಯ ನಿವಾಸಿ ಶಾಬನ್ ಬ್ಯಾರಿ ಎಂಬವರ ಮಗ ಅಶ್ರಫ್(39) ಎಂದು ಗುರುತಿಸಲಾಗಿದೆ.

ರಕ್ತಹೀನತೆ ಖಾಯಿಲೆಯಿಂದ ಬಳಲುತ್ತಿದ್ದ ಇವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 4 ತಿಂಗಳುಗಳಿಂದ ತೀರಾ ಅನಾರೋಗ್ಯದಿಂದ ಕೆಲಸ ಮಾಡಲಾಗದೇ ಮನೆ ಯಲ್ಲಿಯೇ ಇದ್ದರು. ಜೂ.7ರಂದು ಸಂಜೆ ಜ್ವರ ಬಂದ ಕಾರಣ ಇವರು, ಜ್ವರದ ಔಷಧಿ ಕುಡಿದು ರಾತ್ರಿ ಮನೆಯಲ್ಲಿ ಮಲಗಿದ್ದು, ಜೂ.8ರ ನಸುಕಿನ ವೇಳೆ ತೀರಾ ಅಸ್ವಸ್ಥಗೊಂಡ ಇವರು, ಮಣಿಪಾಲದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Similar News