ಬೆಳಗಾವಿ | ಲಾರಿ ಢಿಕ್ಕಿ: ಬೈಕ್ ಸವಾರರಿಬ್ಬರು ಮೃತ್ಯು
Update: 2025-06-16 11:25 IST
ಬೆಳಗಾವಿ: ಸಿಮೆಂಟ್ ಸಾಗಾಟದ ಲಾರಿ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ನಿಪ್ಪಾಣಿ-ಮುಧೂಳ ರಾಜ್ಯ ಹೆದ್ದಾರಿಯ ಮೂಡಲಗಿ ತಾಲೂಕಿನ ಗುರ್ಲಾಪುರ್ ಕ್ರಾಸ್ ನಲ್ಲಿ ರವಿವಾರ ಸಂಭವಿಸಿದೆ.
ಮೃತರನ್ನು ಪಟ್ಟಣದ ಕಜ್ಜಾಳ ಮಡ್ಡಿ ನಿವಾಸಿ ಶ್ರೀಶೈಲ ಹಾದಿಮನಿ (36) ಹಾಗೂ ರಂಗಾಪುರ ಗ್ರಾಮದ ಸಂಜು ಮಾರಾಪುರ (38) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.