×
Ad

ಬಳ್ಳಾರಿ | ಬಾಲಕ ನಾಪತ್ತೆ : ಪ್ರಕರಣ ದಾಖಲು

Update: 2025-11-10 19:58 IST

ಬಳ್ಳಾರಿ,ನ.10 : ನಗರದ ಹೊಸಪೇಟೆ ರಸ್ತೆಯ ವಿನಾಯಕ ನಗರದ ರಂಗ ಮೆಡಿಕಲ್ ಸ್ಟೋರ್ ಬಳಿಯ ನಿವಾಸಿ ಅರುಣ್ ಕುಮಾರ್.ಬಿ ಎಂಬ ಬಾಲಕ ನಾಪತ್ತೆಯಾಗಿದ್ದು, ಈ ಕುರಿತು  ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

14 ವರ್ಷದ ಬಾಲಕ ಚೆಳ್ಳಗುರ್ಕಿಯ ಗಾಂಧಿತತ್ವ ವಸತಿ ಶಾಲೆಯಲ್ಲಿ 8 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ದಸರಾ ಹಬ್ಬದ ರಜೆಗೆ ಮನೆಗೆ ಬಂದು ಮರಳಿ ನ.03 ರಂದು ಶಾಲೆಗೆ ಹೋಗುವುದಾಗಿ ಹೇಳಿ ಹೋದ ಬಾಲಕ ನಾಪತ್ತೆಯಾಗಿದ್ದಾನೆ.  ಬಾಲಕನ ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಚಹರೆ ಗುರುತು:

ಬಾಲಕ ಅಂದಾಜು 4 ವರೆ ಅಡಿ ಎತ್ತರ, ಕೋಲು ಮುಖ, ಬಿಳಿ ಮೈಬಣ್ಣ, ಕಪ್ಪು ಕೂದಲು ಹೊಂದಿರುತ್ತಾನೆ. ಹೊಟ್ಟೆಯ ಬಲಭಾಗದಲ್ಲಿ ಸುಟ್ಟ ಹಳೆಯ ಗಾಯದ ಗುರುತು ಇರುತ್ತದೆ.

ಕಾಣೆಯಾದ ಸಂದರ್ಭದಲ್ಲಿ ಬಾಲಕ ಕೆಂಪು ಬಣ್ಣದ ಅರ್ಧ ತೋಳಿನ ಟಿ-ಶರ್ಟ್ ಧರಿಸಿದ್ದಾನೆ. ಟಿ-ಶರ್ಟ್ ಹಿಂಬದಿ  ಅರುಣ್ ಎಂದು ಇಂಗ್ಲೀಷ್ ಅಕ್ಷರದಲ್ಲಿ ಪ್ರಿಂಟ್ ಇದೆ, ಬಾಲಕ ನೇವಿ ಬ್ಲೂ ಬಣ್ಣದ ನೈಟ್‌ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ.

ಬಾಲಕನ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News