×
Ad

ಔರಾದ್ | ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ: ಪ್ರಕರಣ ದಾಖಲು

Update: 2025-10-11 10:02 IST

ಬೀದರ್: ಮನೆಯ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಘಟನೆ ಔರಾದ್ ತಾಲೂಕಿನ ಮಾಳೆಗಾಂವ್ ಲಸ್ಕರ್ ನಾಯಕ್ ತಾಂಡಾದಲ್ಲಿ ನಡೆದದ್ದು, ಶುಕ್ರವಾರ ಪ್ರಕರಣ ದಾಖಲಾಗಿದೆ.

ಮಾಳೆಗಾಂವ್ ಲಸ್ಕರ್ ನಾಯಕ್ ತಾಂಡಾದ ನಿವಾಸಿ ವಿಠಲ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಮನೆ ಬೀಗ ಹಾಕಿಕೊಂಡು ಮನೆಯವರೆಲ್ಲ ಸೋಯಾ ರಾಶಿ ಮಾಡುವುದಕ್ಕೆ ಹೊಲಕ್ಕೆ ಹೋದಾಗ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

ಮನೆಯಲ್ಲಿದ್ದ ಕಬ್ಬಿಣದ ಕಪಾಟು ಒಡೆದು ಅದರಲ್ಲಿದ್ದ 1.17 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ, ಒಂದು ಸಾವಿರ ರೂ. ಬೆಲೆಬಾಳುವ 10 ಗ್ರಾಂ ಬೆಳ್ಳಿ ಹಾಗೂ 30 ಸಾವಿರ ರೂ. ನಗದು ಕಳವು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News