ಮರ್ಕಝುಲ್ ಹುದಾ ತಾಇಫ್ ಸಮಿತಿ: ಸುಲೈಮಾನ್ ತೋಡಾರ್, ರಝ್ಝಾಖ್ ಕೊಡಂಗಾಯಿ, ಲತೀಫ್ ಪೈವಳಿಕೆ ಸಾರಥಿಗಳು
ಸುಲೈಮಾನ್ ತೋಡಾರ್ | ರಝ್ಝಾಖ್ ಕೊಡಂಗಾಯಿ | ಲತೀಫ್ ಪೈವಳಿಕೆ
ರಿಯಾದ್ : ಪುತ್ತೂರು–ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾದ ತಾಇಫ್ ಘಟಕದ ಮಹಾಸಭೆ ಬಾಬ್ ಅಲ್ ರಯಾ, ಸೂಕ್ ಬಲದ್ನ ‘ದಾರ್ ಅಲ್ ಬಷೀರ್’ನಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಂ.ಎಸ್.ಎಂ. ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ ಮುಹಮ್ಮದ್ ಬಶೀರ್ ಮುಸ್ಲಿಯಾರ್ ಪಾಟ್ರಕೋಡಿ ಅವರನ್ನು ಗೌರವಾಧ್ಯಕ್ಷರಾಗಿ ಹಾಗೂ ಅಶ್ರಫ್ ಸಖಾಫಿ ಕುಂಬಕ್ಕೋಡ್ ಅವರನ್ನು ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು. ಸುಲೈಮಾನ್ ಹಾಜಿ ತೋಡಾರ್ ಅಧ್ಯಕ್ಷರಾಗಿ, ಅಬ್ದುಲ್ ರಝ್ಝಾಖ್ ಕೊಡಂಗಾಯಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅಬ್ದುಲ್ಲತೀಫ್ ಪೈವಳಿಕೆ ಕೋಶಾಧಿಕಾರಿಯಾಗಿ ಆಯ್ಕೆಯಾದರು.
ಹನೀಫ್ ಮುಸ್ಲಿಯಾರ್ ಅಮ್ಮೆಂಬಳ ಮತ್ತು ಹಂಝ ಮಡಿಕೇರಿ ಉಪಾಧ್ಯಕ್ಷರಾಗಿ, ಅರಬಿ ಕುಂಞಿ ಬೀರಿ ಹಾಗೂ ರಿಯಾಝ್ ಉಳ್ಳಾಲ್ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.
ಕಾರ್ಯಕಾರಿ ಸದಸ್ಯರಾಗಿ ಇಖ್ಬಾಲ್ ಮದನಿ ಪಾವೂರು, ನಾಸಿರ್ ಯು.ಟಿ. ಉಪ್ಪಿನಂಗಡಿ, ಇಖ್ಬಾಲ್ ಮುರ ನಾವೂರು, ಎಸ್.ಎ. ರಹ್ಮಾನ್ ಮಿತ್ತೂರು, ಇಲ್ಯಾಸ್ ಮದನಿ ನಾವೂರು, ಅನಸ್ ಉಪ್ಪಿನಂಗಡಿ, ಸಿದ್ದೀಖ್ ಕನ್ಯಾರಕೋಡಿ, ನಾಸಿರ್ ಬೋವು, ಅಬ್ದುಲ್ ಖಾದರ್ ಕೊಡಂಗಾಯಿ, ಅನ್ಸಾರ್ ಸೈದು ಪಳ್ಳಂಗೋಡ್, ಸಲೀಂ ಪಲ್ಲಕ್ಕುಡಲ್, ಅಝರ್ ಉಳ್ಳಾಲ್, ಹಂಝ ಪಕ್ಷಿಕೆರೆ, ನೌಶಾದ್ ಮಾಯಿಪ್ಪಾಡಿ, ಸಫ್ವಾನ್ ಕುತ್ತಾರ್, ಫಯಾಝ್ ಮೂಡಬಿದ್ರಿ, ಹೈದರ್ ಹಾಜಿ ನಂದಾವರ, ಅಬ್ದುಲ್ ಖಾದರ್ ಜಾಲ್ಸೂರ್, ಮನ್ಸೂರ್ ಕುತ್ತಾರ್, ಹಫೀಝ್ ಕುತ್ತಾರ್, ತೌಸೀಫ್ ಬೆಲ್ಮ, ಅಯ್ಯೂಬ್ ಕೋಡಿ, ಹನೀಫ್ ತುರ್ಕಳಿಕೆ, ಅಬ್ಬಾಸ್ ಕನ್ಯಾನ, ಅಬ್ದುಲ್ ಹಮೀದ್ ಕೈಕಂಬ, ಅಬ್ದುಲ್ ಹಮೀದ್ ಕಣ್ಣಂಗಾರ್ ಹಾಗೂ ಅಶ್ರಫ್ ಕರುವೇಲ್ ಅವರನ್ನು ಆಯ್ಕೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಮುಹಮ್ಮದ್ ಬಶೀರ್ ಮುಸ್ಲಿಯಾರ್ ಪಾಟ್ರಕೋಡಿ ವಹಿಸಿದ್ದರು. ಕೆಸಿಎಫ್ ಸೌದಿ ರಾಷ್ಟೀಯ ಸಮಿತಿ ಅಧ್ಯಕ್ಷ ಹಾಗೂ ಮರ್ಕಝುಲ್ ಹುದಾ ರಾಷ್ಟೀಯ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮರ್ಕಝುಲ್ ಹುದಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಬಶೀರ್ ಇಂದ್ರಾಜೆ, ಡಿಕೆಎಸ್ಸಿ ಜಿದ್ದಾ ವಲಯ ಸಂಚಾಲಕ ಅಶ್ರಫ್ ಸಖಾಫಿ ಕುಂಬಕ್ಕೋಡ್ ಹಾಗೂ ಅಶ್ರಫ್ ಸಖಾಫಿ ಕನ್ಯಾನ ಶುಭಾಶಯಗಳನ್ನು ತಿಳಿಸಿದರು.
ಮರ್ಕಝುಲ್ ಹುದಾ ಜಿದ್ದಾ ಘಟಕದ ಉಪಾಧ್ಯಕ್ಷ ಅಶ್ರಫ್ ಎಂ.ಎಸ್.ಎಂ. ಕಕ್ಕಿಂಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿದ್ದಾ ವಲಯದ ನೂತನ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.