×
Ad

ರಿಯಾದ್: DKSC ಫ್ಯಾಮಿಲಿ ಮುಲಾಖಾತ್- 2025

Update: 2026-01-25 15:03 IST

ರಿಯಾದ್: DKSC ಯ 30ನೇ ವಾರ್ಷಿಕೋತ್ಸವ ಪ್ರಯುಕ್ತ "DKSC ಫ್ಯಾಮಿಲಿ ಮುಲಾಖಾತ್- 2025" ರಿಯಾದ್ ನಲ್ಲಿ ಡಿಸೆಂಬರ್ 18, 2025 ಗುರುವಾರ ಅಲ್ ಮಾಸಿಯ ರೆಸಾರ್ಟ್ ನಲ್ಲಿ ಜರಗಿತು.

ಫ್ಯಾಮಿಲಿ ಮುಲಾಖಾತ್ ಕಾರ್ಯಕ್ರಮದ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಬಜ್ಪೆಯವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ DKSC ಕೇಂದ್ರ ಸಮಿತಿ ದಾಈ ಅಬ್ದುರ್ರಶೀದ್ ಸಅದಿ ಅವರು ದುಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇಸ್ಮಾಯೀಲ್ ಕಾಟಿಪಳ್ಳ ಪವಿತ್ರ ಖುರ್ ಆನ್ ನ ಸೂಕ್ತವನ್ನು ಪಠಿಸಿ ಅದರ ಅರ್ಥವನ್ನು ಕನ್ನಡಕ್ಕೆ ಅನುವಾದಿಸಿದರು. ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ಹುಝೈಫ ಪೆರಾಜೆ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯ ಅತಿಥಿಗಳನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು. DKSC ಕೇಂದ್ರ ಸಮಿತಿ ಹಣಕಾಸು ಕಾರ್ಯದರ್ಶಿ ದಾವೂದ್ ಕಜಮಾರ್ ಅವರು ಸಮಾರಂಭವನ್ನು ಉದ್ಘಾಟಿಸಿದರು.

DKSC ರಿಯಾದ್ ವಲಯ ಅಧ್ಯಕ್ಷ ಅಬ್ದುಲ್ ಅಝೀಝ್ ಕಾಟಿಪಳ್ಳ, ಫ್ಯಾಮಿಲಿ ಮುಲಾಖಾತ್ ಕನ್ವೀನರ್ ನಝೀರ್ ಹಾಜಿ ಕಾಶಿಪಟ್ಣ, ಝೋನ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಕಣ್ಣಂಗಾರ್ ಬುರೈದ, DKSC ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು, ವೆನ್ಝ್ ಹೋಮ್ಸ್ ಮಾಲೀಕ ಅಬ್ದುಲ್ ಹಮೀದ್ ವೆನ್ಝ್ ,ದಮ್ಮಾಂ ವಲಯಾಧ್ಯಕ್ಷ ಅಬ್ದುಲ್ ಹಮೀದ್ ಕಾಪು, ರಿಯಾದ್ ವಲಯ ಉಸ್ತುವಾರಿ ಸುಲೈಮಾನ್ ಮಿಲನ್ ಸೂರಿಂಜೆ, DKSC ಸ್ಥಾಪಕ ಸದಸ್ಯ ಅಬ್ದುಲ್ ಗಫೂರ್ ಸಜಿಪ, ಮುಲಾಖಾತ್ ನ ಹಣಕಾಸು ಕಾರ್ಯದರ್ಶಿ ದಾವೂದ್ ಕಂದಕ್, ಕೇಂದ್ರ ಸಮಿತಿ ಆರ್ಗನೈಝಿಂಗ್ ಸೆಕ್ರಟರಿ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ರಿಯಾದ್ ವಲಯ ಹಣಕಾಸು ಕಾರ್ಯದರ್ಶಿ ಇಸ್ಮಾಯಿಲ್ ಕಣ್ಣಂಗಾರ್, ಕೇಂದ್ರ ಸಮಿತಿ ಸದಸ್ಯ ಸಯ್ಯದ್ ಬಾವ ಬಜ್ಪೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫ್ಯಾಮಿಲಿ ಮುಲಾಖಾತ್ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಬಜ್ಪೆರವರು DKSC ಮತ್ತು ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಈವರೆಗಿನ ಸಾಧನೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಪಿಪಿಟಿ ಮೂಲಕ ಸವಿಸ್ತಾರವಾಗಿ ವಿವರಿಸಿದರು.

ಝೋನ್ ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಸ್ತಾದ್ ಅಲ್ ಖರ್ಜ್, ಉಪಾಧ್ಯಕ್ಷ ಯೂಸುಫ್ ಹಾಜಿ ಕಳಂಜಿಬೈಲ್, ಸಲಹೆಗಾರರಾದ ಮುಸ್ತಫ ಸಅದಿ ಸೂರಿಕುಮೇರು, ರಿಯಾದ್ ವಲಯ ನೂತನ ಆರ್ಗನೈಝರ್ ಉಸ್ತಾದ್ ಆಸಿಫ್ ಅಶ್ರಫಿ, ಅಬ್ದುಲ್ಲ ಮದನಿ, ಹಾರಿಸ್ ಸಖಾಫಿ, ಇಬ್ರಾಹೀಂ ಬಜ್ಪೆ, ಸೈಫುಲ್ಲಾ ಕಾಟಿಪಳ್ಳ, ಶರೀಫ್ ತೋಕೂರು, ಅಬ್ದುಲ್ ಮಜೀದ್ ವಿಟ್ಲ, ನೌಫಲ್ ಮನಾಲ್, ಮುನೀರ್ ಕೃಷ್ಣಾಪುರ, ಜುನೈದ್ ಮೂಡುತೋಟ, ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ನೇತೃತ್ವ ನೀಡಿದರು.

ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಜರುಗಿದ ದಫ್ ಕಾರ್ಯಕ್ರಮವು ಮುಲಾಖಾತ್ ಸಮಾರಂಭಕ್ಕೆ ಮೆರುಗು ನೀಡಿತ್ತು. DKSC ಇದರ ವತಿಯಿಂದ ನಡೆದ ಲಕ್ಕಿ ಡ್ರಾದಲ್ಲಿ ಬಂಪರ್ ಬಹುಮಾನವನ್ನು ಮುಹಮ್ಮದ್ ಮಂಗಳೂರು ತನ್ನದಾಗಿಸಿದರು.

ವೆನ್ಝ್ ಹೋಮ್ಸ್ ಪ್ರಾಯೋಜಕತ್ವದ ಡ್ರಾದಲ್ಲಿ ಅಬ್ದುಸ್ಸಲಾಂ ಎಣ್ಮೂರ್ ರವರು ಮೂರು ದಿವಸ ದುಬೈ ವಾಸ್ತವ್ಯ ಸೌಲಭ್ಯ ಸಹಿತ ರಿಟರ್ನ್ ಟಿಕೆಟ್ ವಿಜೇತರಾದರು. ಹಲವಾರು ಸಂಘ ಸಂಸ್ಥೆಗಳ ನೇತಾರರು, ಹಾಗು DKSC ರಿಯಾದ್ ವಲಯದ ಅಧೀನಕ್ಕೊಳಪಟ್ಟ ಬತ್ತ, ಬುರೈದ, ಸನಯ್ಯಾ, ಶಿಫಾ, ಅಲ್ ಖರ್ಜ್, ಮಲಾಝ್, ದಲ್ಲಾ, ಹಾಯಿಲ್ ಘಟಕಗಳ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಹಾಜರಿದ್ದರು.

ಪುರುಷರಿಗೆ ಹಾಗೂ ಮಕ್ಕಳ ವಿವಿಧ ಆಟೋಟ ಸ್ಪರ್ಧೆಗಳನ್ನು ಹನೀಫ್.ನ್.ಎಸ್ ಇವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಸಲಾಯಿತು. ನೆರೆದ ಸಭಿಕರಿಗೆ ಆಕರ್ಷಕ ಹಾಗೂ ವಿನೂತನ ಶೈಲಿಯ ಡಿಜಿಟಲ್ ಕ್ವಿಝ್ ಸ್ಪರ್ಧೆಯನ್ನು ಅಬ್ದುಲ್ ಸಲಾಂ ಎಣ್ಮೂರ್ ಇವರು ನಡೆಸಿದರು. ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಖಿರಾಅತ್,ಹಾಗೂ ಇನ್ನಿತರ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.

ದುರತ್ ಲಮಾರ್ ಕ್ಲಿನಿಕ್ ವತಿಯಿಂದ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು. ಝೂಮ್ ಪ್ಲಸ್,ವ್ಯಾಲ್ಯೂ ಸ್ಟಾರ್ ಹಾಗು ಪ್ರಾನ್ ಕಂಪೆನಿ ವತಿಯಿಂದ ಆಕರ್ಷಕ ಗಿಫ್ಟ್ ಗಳನ್ನು ವಿತರಿಸಲಾಯಿತು.

ದಾವೂದ್ ಸಅದಿ ಉರುವಾಲುಪದವು ಹಾಗೂ ಹುಝೈಫಾ ಪೆರಾಜೆ ನೇತೃತ್ವದಲ್ಲಿ ಸ್ವಯಂ ಸೇವಕರು ಉತ್ತಮ ಸೇವೆಗೈದು ಫ್ಯಾಮಿಲಿ ಮುಲಾಖಾತ್ ಯಶಸ್ವಿಗೆ ಕಾರಣಕರ್ತರಾದರು.

ಅವಿಭಜಿತ ದಕ್ಷಿಣ ಕನ್ನಡದ ಸಾಂಪ್ರದಾಯಿಕ ತಿಂಡಿತಿನಿಸುಗಳಾದ ಚರ್ಮುರಿ, ಜಿಲೇಬಿ, ಬೇಯಿಸಿದ ಮೊಟ್ಟೆ, ಚಿಕನ್ ಸೂಪ್, ಪಾಯಸ, ಮಸಾಲಾ ಚಾ, ಕಾಫಿ, ಜ್ಯೂಸ್, ಗಳಿಂದ ಕೂಡಿದ ಉತ್ತಮ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಅತಿಥಿಗಳಗೆ ಉಣಬಡಿಸಲಾಯಿತು.

DKSC ರಿಯಾದ್ ವಲಯ ಸಂವಹನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸುಲೈಮಾನ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.

1995 ರಲ್ಲಿ ಸ್ಥಾಪಿತ ಗೊಂಡ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಗೆ ಇದೀಗ 30 ರ ಹರೆಯ. DKSCಯ ಅಧೀನದಲ್ಲಿ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ತಅಲೀಮಿಲ್ ಇಹ್ಸಾನ್ ನಲ್ಲಿ ಸುಮಾರು ಎರಡು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಎಲ್ ಕೆಜಿ ಯಿಂದ ಡಿಗ್ರಿಯವರೆಗೆ ಲೌಕಿಕ ವಿಧ್ಯಾಭ್ಯಾಸ ಪಡೆದು ಪದವೀಧರರಾಗಿ ಹೊರ ಹೊಮ್ಮುತ್ತಿದ್ದಾರೆ ಅದಲ್ಲದೆ ಧಾರ್ಮಿಕ ವಿಧ್ಯಾಭ್ಯಾಸ ಪಡೆದು ಇಹ್ಸಾನಿ ಬಿರುದು ಪಡೆದು ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯ್ಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News