ಕಲಬುರಗಿ | ಗೋದುತಾಯಿ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ
Update: 2025-04-30 16:51 IST
ಕಲಬುರಗಿ : ಬಸವೇಶ್ವರರು ಕಾಯಕವೇ ಕೈಲಾಸವೆಂದು ಸಾರಿ ಜನರಿಗೆ ದುಡಿದು ಬದುಕುವ ಪಥವನ್ನು ತೋರಿದ ಮಹಾಮಾನವತಾವದಿಯಾಗಿದ್ದರು ಎಂದು ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವೇಶ್ವರ 892ನೆ ಜಯಂತಿ ಆಚರಿಸಿ ಮಾತನಾಡಿದರು.
ಮಹಾವಿದ್ಯಾಲಯದ ಸಿಬ್ಬಂದಿಯವರಾದ ಡಾ.ಕಾಮೇಶ ದಾಮಾ, ಡಾ.ಮಿಲಿಂದಕುಮಾರ ಸುಳ್ಳದ್, ಕೃಪಾಸಾಗರ ಗೊಬ್ಬುರ್, ಬಾಬುರಾವ, ಅಶೋಕಕುಮಾರ ಮೂಲಗೆ, ಪ್ರಭಾವತಿ, ಸಾವಿತ್ರಿ, ಮಂಜುಳಾ, ಲಕ್ಷ್ಮಿ ಮತ್ತು ವಿದ್ಯಾರ್ಥಿನಿಯರು ಇದ್ದರು.