×
Ad

ಕಲಬುರಗಿ | ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ : ಕವನ ಸಂಕಲನ ಲೋಕಾರ್ಪಣೆ

Update: 2026-03-08 22:39 IST

ಕಲಬುರಗಿ : ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘ (ರಿ), ರಾಜಾಪೂರ-ಕಲಬುರಗಿ ವತಿಯಿಂದ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಂಘದ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 17 ಮಹಿಳೆಯರಿಗೆ “ಕರ್ನಾಟಕ ಸಾಧಕ ಮಹಿಳೆ-2026” ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಸುಮಾರು 8 ಸಾಧಕರಿಗೆ “ಸೇವಾರತ್ನ” ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಖ್ಯಾತ ಉದ್ಯಮಿಗಳಾದ ಡಾ.ಅಮರೇಶ್ವರಿ ಬಾಬುರಾವ ಚಿಂಚನಸೂರ ಉದ್ಘಾಟಿಸಿದರು. ಪ್ರೊ.ರಮೇಶ ಬಿ.ಯಾಳಗಿ ರಚಿಸಿದ “ನನ್ನೆದೆಯ ಅಂಗಳದಿ”ಕವನ ಸಂಕಲನವನ್ನು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ.ನಮೋಶಿ ಅವರು ಲೋಕಾರ್ಪಣೆ ಮಾಡಿ, ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್.ಮಾಲಿಪಾಟೀಲ ಅವರು ಪೂಜೆ ಮತ್ತು ಪುಷ್ಪಾರ್ಚನೆ ನೆರವೇರಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್.ನಿರಗುಡಿ ಅವರು ಕೃತಿಯ ಪರಿಚಯ ಮಾಡಿಕೊಟ್ಟರು.

ಮಹಾನಗರ ಪಾಲಿಕೆಯ ಉಪಮೇಯರ್ ತೃಪ್ತಿ ಎಸ್. ಲಾಖೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕೃಷಿ ಇಲಾಖೆಯ ನಿವೃತ್ತ ಸಹ ನಿರ್ದೇಶಕಿ ಮಧುಮತಿ ಪಾಟೀಲ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಶರಣಮ್ಮ ಹೆಂಬಾಡಿ ಗೌರವ ಉಪಸ್ಥಿತರಿದ್ದರು. ಸಂಘದ ಗೌರವ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಗೋತಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಶರಣಪ್ಪ ಗುಂಡಗುರ್ತಿ, ಗುರು ಬಂಡಿ, ಶ್ರೀ ಸಿದ್ದರಾಮ ದಂಡಗುಲ್ಕರ್, ಡಾ.ಸುನೀಲಕುಮಾರ್ ವಂಟಿ, ಕುಶಾಲ ಆಂದೋಲ, ರಾಜಕುಮಾರ ತರಿ, ಶಂಕರ್ಜಿ ಹೂವಿನಹಿಪ್ಪರಗಿ, ಕಲ್ಯಾಣಕುಮಾರ ಬೆಳಕೇರಿ, ರಾಜಶೇಖರ ಮುಸ್ತಾರಿ ಹಾಗೂ ಗೌತಮ ಬೊಮ್ಮನಹಳ್ಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರೊ.ರಮೇಶ ಬಿ.ಯಾಳಗಿ, ಕಾರ್ಯದರ್ಶಿ ಯಲ್ಲಾಲಿಂಗ ಝ ದಂಡಿನ, ಸಂಚಾಲಕ ಅಶೋಕ ಉಪ್ಪಿನ ಹಾಗೂ ಸದಸ್ಯರಾದ ವಾಣಿ ಶ್ರೀ, ಸಿದ್ದರಾಮ ಹಂಚನಾಳ, ಸಂತೋಷ ನಗನೂರ, ಭೀರು ಪೂಜಾರಿ ಮತ್ತು ನಾಗಣ್ಣ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕಾರ್ಯಕ್ರಮದ ಬಳಿಕ ವಿವಿಧ ಕಲಾವಿದರಿಂದ ಭರತನಾಟ್ಯ, ಜಾನಪದ ನೃತ್ಯ, ಸಂಗೀತ ರಸಮಂಜರಿ, ಹಾಸ್ಯ ಹಾಗೂ ಮಿಮಿಕ್ರಿ ಕಾರ್ಯಕ್ರಮಗಳು ಜರುಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News