×
Ad

ಕಲಬುರಗಿ | ಶ್ರೀ ಶರಣಬಸವೇಶ್ವರರ ಮಹಾರಥೋತ್ಸವ : ಸಹಸ್ರಾರು ಮಂದಿ ಭಾಗಿ

Update: 2026-03-08 22:32 IST

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ರೀ ಶರಣಬಸವೇಶ್ವರರ 204ನೆಯ ಜಾತ್ರೋತ್ಸವ ನಿಮಿತ್ತ ರವಿವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ಮಹಾದಾಸೋಹಿ ಶರಣ ಶ್ರೀ ಶರಣಬಸವೇಶ್ವರರ ಮಹಾರಥೋತ್ಸವವು ಜರುಗಿತು.

ಶರಣಬಸವೇಶ್ವರ ಸಂಸ್ಥಾನದ 9ನೆಯ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಅವರು ಪ್ರಸಾದ ಬಟ್ಟಲು (ಬೆಳ್ಳಿ ತಟ್ಟೆ) ಹಾಗೂ ಲಿಂಗ ಸಜ್ಜಿಕೆ (ಪವಿತ್ರ ಲಿಂಗವನ್ನು ಇಟ್ಟುಕೊಳ್ಳಲು ಸಂತರು ಬಳಸುತ್ತಿದ್ದ ಶ್ರೀಗಂಧದ ಪೆಟ್ಟಿಗೆ)ತೋರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥಾನದ ಅಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಣಿ ಅವ್ವಾಜಿ, ಕಾರ್ಯದರ್ಶಿ ಬಸವರಾಜ ದೇಶಮುಖ, ಭವಾನಿ ಎಸ್. ಅಪ್ಪ, ಶಿವಾನಿ ಎಸ್.ಅಪ್ಪ, ಮಹೇಶ್ವರಿ ಎಸ್.ಅಪ್ಪ, ಡಾ.ಅಲ್ಲಮಪ್ರಭು ದೇಶಮುಖ ಸೇರಿದಂತೆ ಸಂಸ್ಥಾನದ ಪ್ರಮುಖರು ಇದ್ದರು.

ಸಹಸ್ರಾರು ಭಕ್ತರು ಇದೇ ವೇಳೆಯಲ್ಲಿ ಜೈಘೋಷಣೆ ಹಾಕಿದರು.

ರಥೋತ್ಸವ ಪ್ರಾರಂಭವಾಗುವ ಮೊದಲು ದೇವಾಲಯದಲ್ಲಿ ಅಲಂಕರಿಸಲಾದ ರಥದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳು ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಇದೇ ವೇಳೆಯಲ್ಲಿ ದೇವಸ್ಥಾನದ ಆವರಣದಲ್ಲಿ ನಂದಿಕೋಲು, ಪಲ್ಲಕ್ಕಿ ಉತ್ಸವ ನಡೆಯಿತು.

ಶ್ರೀ ಶರಣಬಸವೇಶ್ವರರ ಮಹಾರಥೋತ್ಸವಕ್ಕೆ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕೆಲವು ಭಕ್ತರು ಕಾಲ್ನಡಿಗೆಯ ಮೂಲಕ ದೇವಸ್ಥಾನಕ್ಕೆ ತಲುಪಿದರೆ ಇನ್ನುಳಿದವರು ಕಾರು, ಕ್ರಷರ್, ಜೀಪ್, ಮಿನಿ ಬಸ್, ಮತ್ತಿತ್ತರ ವಾಹನಗಳ ಮೂಲಕ ಆಗಮಿಸಿದ್ದರು.

ವಿವಿಧ ವಾಧ್ಯಗಳೊಂದಿಗೆ ನೆರವೇರಿದ ರಥೋತ್ಸವದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಗರ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದರು.

ಡಾ.ಶರಣಬಸವಪ್ಪ ಅಪ್ಪ ಅವರ ಅನುಪಸ್ಥಿತಿಯಲ್ಲಿ ರಥೋತ್ಸವ:

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ನಂತರ ಇದೇ ಮೊದಲ ಬಾರಿಗೆ, ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪಾಜಿಯಯವರ ಅನುಪಸ್ಥಿತಿಯಲ್ಲಿ ಜಾತ್ರೆಗೆ ಚಾಲನೆ ದೊರಕಿತು.

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News