×
Ad

ಕಲಬುರಗಿ | ಸಿನಿಮಾ ಎನ್ನುವುದು ಪ್ರಜಾಸತ್ತಾತ್ಮಕ ಒಕ್ಕೂಟದ ಕಲೆ : ಬರಗೂರು ರಾಮಚಂದ್ರಪ್ಪ

Update: 2025-08-29 22:03 IST

ಕಲಬುರಗಿ: ಸಿನಿಮಾ ಕೇವಲ ಮನರಂಜನೆಯ ಸಾಧನವಲ್ಲ. ಏಕಾಂತ ಮತ್ತು ಲೋಕಾಂತದ ವಿಷಯಗಳನ್ನು ಅಂತರ್ಗತಗೊಳಿಸುವುದೇ ಸಿನಿಮಾದ ಉದ್ದೇಶ. ಇಲ್ಲಿ ಶ್ರಮ ಮತ್ತ ಸೃಜನಶೀಲತೆ ಒಕ್ಕೂಟಗೊಳಿಸುವುದು ಸಿನಿಮಾ. ಇಲ್ಲಿ ಕಾರ್ಮಿಕರು, ನಿರ್ದೇಶಕರು, ನಟರು, ಕಲಾವಿದರು, ಸಂಗೀತ ಸಂಯೋಜಕರು, ಕವಿಗಳು, ಸಂಕಲನಕಾರರು ಹೀಗೆ ಅನೇಕರು ಸೇರಿ ಸಿನಿಮಾ ತಯಾರಿಸುತ್ತಾರೆ. ಅವರೆಲ್ಲರ ಮಧ್ಯೆ ಒಳ್ಳೆಯ ಬಾಂಧವ್ಯ ಇರುತ್ತದೆ. ಹೀಗಾಗಿ ಇದು ಪ್ರಜಾಸತ್ತಾತ್ಮಕ ಒಕ್ಕೂಟ ಕಲೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸರಣಿ ಉಪನ್ಯಾಸ ಮಾಲೆಯಲ್ಲಿ ಸಾಹಿತ್ಯ ಮತ್ತು ಸಿನಿಮಾ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಭಕ್ತ ಧ್ರುವ ಕನ್ನಡದ ಮೊದಲ ಸಿನಿಮಾ ಆಗಬೇಕಿತ್ತು. ಬಿಡುಗಡೆ ತಡವಾದರಿಂದ ‘ಸತಿಸುಲೋಚನ’ ಕನ್ನಡ ಮೊದಲ ಸಿನಿಮಾ ಎಂದು ಪ್ರಸಿದ್ಧಿ ಪಡೆಯಿತು.

ಕುಲಪತಿಗಳಾದ ಪ್ರೊ.ಅಬ್ದುಲ್ ರಬ್ ಉಸ್ತಾದ್ ಮಾತನಾಡಿದರು. ಪ್ರೊ.ಎಚ್.ಟಿ. ಪೋತೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ.ರಮೇಶ ರಾಠೋಡ, ಡಾ.ಶ್ರೀಶೈಲ ನಾಗರಾಳ, ಡಾ.ಸೂರ್ಯಕಾಂತ ಸುಜ್ಯಾತ್, ಯುವನಟ ಆಕಾಂಕ್ಷ ಬರಗೂರು ವೇದಿಕೆಯಲ್ಲಿದರು. ಡಾ. ಸಿದ್ರಾಮ ಹೊನ್ಕಲ್, ಬೋಡೆ ರಿಯಾಜ್ ಅಹ್ಮದ್, ವೀರಶೆಟ್ಟಿ ಗಾರಂಪಳ್ಳಿ ಉಪಸ್ಥಿತರಿದ್ದರು. ಡಾ.ಎಂ.ಬಿ.ಕಟ್ಟಿ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News