×
Ad

ಕಲಬುರಗಿ: ಯುವಕ ಆತ್ಮಹತ್ಯೆ

Update: 2024-11-30 16:01 IST

ಕಲಬುರಗಿ: ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಹತ್ತಿರದ ಜಮ್ ಶೆಟ್ಟಿ ನಗರದ ವ್ಯಾಪ್ತಿಯಲ್ಲಿರುವ ಹೊಲವೊಂದರಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜಂಶೆಟ್ಟಿ ನಗರದ ನಿವಾಸಿ ಪ್ರಶಾಂತ್ ಸಿದ್ಧರಾಮ ಕುಲಾಲಿ(28) ಆತ್ಮಹತ್ಯೆ ಮಾಡಿಕೊಂಡವರು.

ಶುಕ್ರವಾರ ರಾತ್ರಿ ಊಟ ಮುಗಿದ ಬಳಿಕ ಮನೆಯಿಂದ ತೆರಳಿದ ಇವರು ಬಳಿಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಈ ಬಗ್ಗೆ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News