×
Ad

ಸೀನಿಯರ್ ಛೇಂಬರ್ ಕಾರ್ಕಳ ಲೀಜನ್ ಅಧ್ಯಕ್ಷರಾಗಿ ಅಕ್ಷತಾ ಆಯ್ಕೆ

Update: 2023-07-03 18:44 IST

ಉಡುಪಿ, ಜು.೩: ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಕಾರ್ಕಳ ಲೀಜನ್ ಇದರ ನೂತನ ಅಧ್ಯಕ್ಷರಾಗಿ ಸಿಎ ಅಕ್ಷತ ಆರ್.ಸುಧೀರ್ ಆಯ್ಕೆ ಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಸಿಎ ವಿಜಯಲಕ್ಷ್ಮಿ ಕೆ ಹಾಗೂ ಖಜಾಂಚಿಯಾಗಿ ಸಿಎ ಸನ್ಮತ್ ಹೆಗ್ಡೆ, ಜಂಟಿ ಕಾರ್ಯದರ್ಶಿಯಾಗಿ ಸಿಎ ಅಭಿಷೇಕ್ ಸುವರ್ಣ, ಉಪಾಧ್ಯಕ್ಷರಾಗಿ ಸಿಎ ಡಾ.ಅವಿನ್ ಆಳ್ವ ಹಾಗೂ ನಿರ್ದೇಶಕರಾಗಿ ಸಿಎ ಚಂದ್ರಹಾಸ್ ಸುವರ್ಣ, ಸಿಎ ರೋಹನ್ ಆಚಾರ್ಯ, ಸಿಎ ನಯನಾ ಹೆಗ್ಡೆ, ಸೀನಿಯರೆಟ್ ವಿಭಾಗದ ಅಧ್ಯಕ್ಷರಾಗಿ ಸಿಎ ಸುಪ್ರೀಯಾ ಹಾಗೂ ಸೀನಿಯ ರೆಟ್ ಕಾರ್ಯದರ್ಶಿಯಾಗಿ ಸಿಎ ಡಾ.ಪೂಜಾ ರಾಣಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಾಕ್ಷ ಸಿಎ ಹರಿಪ್ರಸಾದ್ ರೈ ಜೆ.ಕೆ., ಸಲಹೆಗಾರ ಸಿಎ ಗಿರೀಶ್ ರಾವ್, ಪೂರ್ವಾಧ್ಯಕ್ಷರು ಸಿಎ ಸುನೀಲ್ ಕೋಟ್ಯಾನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News