×
Ad

ವಿದ್ಯುತ್ ಆಘಾತ: ಬಿಹಾರ ಮೂಲದ ಕಾರ್ಮಿಕ ಮೃತ್ಯು

Update: 2023-07-15 22:20 IST

ಕಾರ್ಕಳ, ಜು.೧೫: ವಿದ್ಯುತ್ ಆಘಾತದಿಂದ ಬಿಹಾರ ಮೂಲಕ ಕಾರ್ಮಿಕ ರೊಬ್ಬರು ಮೃತಪಟ್ಟ ಘಟನೆ ಜು.14ರಂದು ಸಂಜೆ ವೇಳೆ ನಿಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಬಿಹಾರ ಮೂಲದ ನಿಟ್ಟೆ ಬಾಡಿಗೆ ಮನೆ ನಿವಾಸಿ ಸೌರಭ್ ಕುಮಾರ್(20) ಎಂದು ಗುರುತಿಸಲಾಗಿದೆ. ಇವರ ಬ್ರೆಶ್, ಸೋಪ್, ಪೇಸ್ಟ್‌ನ್ನು ಮಂಗಗಳು ಕಿಟಕಿಯಿಂದ ತೆಗೆದುಕೊಂಡು ಹೋಗಿ ಕಿಟಕಿಯ ಮೇಲ್ಘಾಗದಲ್ಲಿಯ ಸಜ್ಜಾದ ಬಳಿ ಇಟ್ಟಿದ್ದು, ಇದನ್ನು ತೆಗೆಯಲು ಕಬ್ಬಿಣದ ಏಣಿಯನ್ನು ಹಾಕುತ್ತಿದ್ದರು.

ಈ ವೇಳೆ ಅಲ್ಲೇ ಹಾದು ಹೋಗಿರುವ ವಿದ್ಯುತ್ ತಂಗಿ ಏಣಿ ತಾಗಿ ವಿದ್ಯುತ್ ಆಘಾತದಿಂದ ಸೌರಭ್ ನೆಲಕ್ಕೆ ಬಿದ್ದರು. ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News