×
Ad

ಮಣಿಪಾಲ: ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ; ತಂದೆ, ಮಗಳಿಗೆ ಗಾಯ

Update: 2023-07-15 20:28 IST

ಮಣಿಪಾಲ, ಜು.15: ಬಸ್ಸೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ತೀವ್ರವಾಗಿ ಗಾಯಗೊಂಡ ಘಟನೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಇಂದು ಸಂಜೆ ನಡೆದಿದೆ.

ಗಾಯಗೊಂಡವರನ್ನು ಅಂಜಾರು ಗ್ರಾಮದ ಕಾಜರುಗುತ್ತು ನಿವಾಸಿ ರಮೇಶ್ ಜಿ.ಪ್ರಭು (69) ಹಾಗೂ ಅವರ ಮಗಳು ಮಾಹೆ ಉದ್ಯೋಗಿ ಶ್ರೀದೇವಿ ಪ್ರಭು (42) ಎಂದು ಗುರುತಿಸಲಾಗಿದೆ.

ಕೆಎಂಸಿ ಕ್ವಾಟರ್ಸ್ ಕಡೆಯಿಂದ ಟೈಗರ್ ಸರ್ಕಲ್ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಉಡುಪಿಯಿಂದ ಮಣಿಪಾಲ ಕಡೆ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ತಂದೆ ಮಗಳು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News