×
Ad

ಮಾಂಟ್ರಾಡಿ: ಕಾಲು ಜಾರಿ ಕೆರೆಗೆ ಬಿದ್ದು ಕೃಷಿಕ ಮೃತ್ಯು; 5 ಲಕ್ಷ ರೂ. ಪರಿಹಾರ

Update: 2023-07-06 22:23 IST

ಮಂಗಳೂರು, ಜು.6: ಮೂಡುಬಿದಿರೆ ತಾಲೂಕಿನ ಮಾಂಟ್ರಾಡಿ ಗ್ರಾಮದ ಕೃಷಿಕ ನಿರಂಜನ್ ಎನ್. ಮುದ್ಯ (42) ಎಂಬವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಅಡಿಕೆ ತೋಟಕ್ಕೆ ನೆರೆ ನೀರಿನ ಹರಿವು ಹೆಚ್ಚಾಗಿರುವ ಬಗ್ಗೆ ಪರಿಶೀಲಿಸಲು ಜು.5ರ ರಾತ್ರಿ 9ಕ್ಕೆ ಮನೆಯಿಂದ ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಗುರುವಾರ ಬೆಳಗ್ಗೆ ಸುಮಾರು 9ರ ವೇಳೆಗೆ ನಿರಂಜನ್‌ರು ಮೃತಪಟ್ಟಿರುವ ವಿಷಯ ಗೊತ್ತಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

*ಮೂಡುಬಿದಿರೆ ತಹಶೀಲ್ದಾರರ ವರದಿಯನ್ನು ಆಧರಿಸಿ ದ.ಕ.ಜಿಲ್ಲಾಡಳಿತವು ಮೃತಪಟ್ಟ ಕೃಷಿಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News