×
Ad

ಕ್ಷುಲ್ಲಕ ಕಾರಣಕ್ಕೆ ಪತಿಯೊಂದಿಗೆ ಜಗಳ: ಪತ್ನಿ ಆತ್ಮಹತ್ಯೆ

Update: 2023-07-04 21:17 IST

ಕಾರ್ಕಳ : ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದು ಜಗಳವಾಡಿದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.೩ರಂದು ರಾತ್ರಿ ೧೧ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಮುಡಾರು ಗ್ರಾಮದ ಹೊಯ್ಪಾಲು ನಿವಾಸಿ ಪ್ರವೀಣ್ ಭಂಡಾರಿ ಎಂಬವರ ಪತ್ನಿ ಭವ್ಯಾ (32) ಎಂದು ಗುರುತಿಸಲಾಗಿದೆ. ಮುಂಗೋಪ ಹಾಗೂ ಹಠದ ಸ್ವಭಾವ ಹೊಂದಿದ್ದ ಭವ್ಯಾ, ಗಂಡನೊಂದಿಗೆ ಕೋಳಿ ಸಾಕುವ ವಿಚಾರ ದಲ್ಲಿ ಕೋಪ ಮಾಡಿಕೊಂಡು ಮನೆಯ ಕೊಠಡಿಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News