×
Ad

ಸ್ಕೂಟರ್ ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2023-06-30 21:04 IST

ಉಡುಪಿ, ಜೂ.30: ಸ್ಕೂಟರ್ ಢಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಣಿಪುರದ ಮೀನುಗಾರರ ಸೊಸೈಟಿ ಎದುರು ಗುರುವಾರ ಸಂಜೆ 5:40ರ ಸುಮಾರಿಗೆ ನಡೆದಿದೆ.ಮೃತರನ್ನು ವಾದಿರಾಜ ಆಚಾರ್ಯ ಎಂದು ಗುರುತಿಸಲಾಗಿದೆ.

ದೆಂದೂರುಕಟ್ಟೆಯಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ವಾದಿರಾಜ ಆಚಾರ್ಯ ಅವರು ರವಿ ಎಂಬವರೊಂದಿಗೆ ತನ್ನ ಬಜಾಜ್ ಕ್ಯಾಲಿಬರ್ ಬೈಕ್‌ನಲ್ಲಿ ಕಟ್ಪಾಡಿ ಕಡೆ ಬರುತ್ತಿರುವಾಗ ಮಣಿಪುರ ಮೀನುಗಾರರ ಸೊಸೈಟಿ ಎದುರು ಉಮೇಶ್ ಎಂಬವರು ಚಲಾಯಿಸುತಿದ್ದ ಹೊಂಡಾ ಆಕ್ಟೀವಾ ಢಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಗಂಭೀರ ಗಾಯಗೊಂಡ ಇಬ್ಬರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ವಾದಿರಾಜ ಆಚಾರ್ಯ ಮೃಪಟ್ಟಿದ್ದರು. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News