×
Ad

ಸುರತ್ಕಲ್‌: ಕಾಂಗ್ರೆಸ್ ವತಿಯಿಂದ ಮೌನ ಪ್ರತಿಭಟನೆ

Update: 2023-07-12 22:02 IST

ಸುರತ್ಕಲ್‌: ದೇಶದ ಸಂವಿಧಾನದ ಚೌಕಟ್ಟುಗಳನ್ನು ಮೀರಿ ಉದ್ದೇಶ ಪೂರಿತವಾಗಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಸುರತ್ಕಲ್‌ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಫೈಒವರ್‌ನ ಕೆಳಭಾಗದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ವೇಳೆ ಮಾತನಾಡಿದ ಕಾಂಗ್ರೆಸ್‌ ಮುಖಂಡರು, ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಧ್ವೇಷದ ರಾಜಕಾರಣ ಮಾಡುತ್ತಿದೆ. ರಾಹುಲ್‌ ಗಾಂಧಿಗೆ ನಿರಂತರ ಕಿರುಕುಳ ನೀಡುವ ಪರಂಪರೆ ಬಿಜೆಪಿ ಆರಂಭಿಸಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆಯ ವಿರುದ್ಧ ಮೌನ ಪ್ರತಿಭಟನೆಯನ್ನು ಮಾಡಲಾಗಿದೆ ಎಂದರು.

ಈ ಸಂದರ್ಭ ಸುರತ್ಕಲ್‌ ಬ್ಲಾಕ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಮಾಜಿ ಮೇಯರ್‌ ಗುಲ್ಝಾರ್‌ ಬಾನು, ಕವಿತಾ ಸನಿಲ್‌, ಅಹ್ಮದ್‌ ಕುಂಜತ್ತಬೈಲ್‌, ಸದಾಶಿವ ಶೆಟ್ಟಿ, ರಾಜೇಶ್‌ ಕುಳಾಯಿ, ಶಶಿಕಲಾ ಪದ್ಮನಾಭ, ಅಯಾಝ್‌ ಕೃಷ್ಣಾಪುರ, ಮುಹಮ್ಮದ್‌ ಶಮೀರ್‌ ಕಾಟಿಪಳ್ಳ, ಜಲೀಲ್‌ ಬದ್ರಿಯಾ ಕೃಷ್ಣಾಪುರ, ಕುಮಾರ್‌ ಮೆಂಡನ್‌, ಚಂದ್ರಹಾಸ, ಮಲ್ಲಿಕಾರ್ಜುನ್‌, ರೆಹ್ಮಾನ್‌ ಖಾನ್‌ ಕುಂಜತ್ತಬೈಲ್‌ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News