×
Ad

ಸಿಡಿಲು ಮಳೆ: ಎರಡು ಮನೆಗಳಿಗೆ ಹಾನಿ

Update: 2023-07-16 20:44 IST

ಉಡುಪಿ, ಜು.16: ಕಳೆದ ರಾತ್ರಿ ಸುರಿದ ಮಳೆ ಹಾಗೂ ಸಿಡಿಲಿಗೆ ಕಾಪು ತಾಲೂಕಿನ ಎರಡು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಕಾಪು ಪಡು ಗ್ರಾಮದ ಗಣೇಶ್ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಅಪಾರ ಹಾನಿ ಸಂಭವಿಸಿದ್ದು, ಇದರಿಂದ ಸುಮಾರು 40ಸಾವಿರ ರೂ. ಮತ್ತು ಕಟಪಾಡಿ ಏಣಗುಡ್ಡೆಯ ಆಸೀಫ್ ಎಂಬವರ ಮನೆಗೆ ಮಳೆ ಯಿಂದಾಗಿ ಹಾನಿಯಾಗಿ ಸುಮಾರು 40ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ- 9.1 ಮಿ.ಮೀ., ಬ್ರಹ್ಮಾವರ- 24.8ಮಿ.ಮೀ., ಕಾಪು- 11.2 ಮಿ.ಮೀ., ಕುಂದಾಪುರ- 22.3 ಮಿ.ಮೀ., ಬೈಂದೂರು- 23.1 ಮಿ.ಮೀ., ಕಾರ್ಕಳ- 17.2 ಮಿ.ಮೀ., ಹೆಬ್ರಿ- 22.1 ಮಿ.ಮೀ. ಹಾಗೂ ಜಿಲ್ಲೆಯಲ್ಲಿ ಸರಾಸರಿ 28.1 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News