×
Ad

ಉಡುಪಿ ಜಿಲ್ಲೆಯ ಪೊಲೀಸ್ ಉಪನಿರೀಕ್ಷಕರುಗಳ ವರ್ಗಾವಣೆ

Update: 2023-07-04 20:46 IST

ಉಡುಪಿ : ಮಂಗಳೂರು ಪಶ್ಚಿಮ ವಲಯದ ಎಸ್ಸೈಗಳನ್ನು ತಕ್ಷಣ ದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಉಡುಪಿ ನಗರ ಠಾಣೆಯ ಎಸ್ಸೈ ರವಿ ಬಸಪ್ಪ ಕಾರಗಿ ಅವರನ್ನು ಅಜೆಕಾರು ಠಾಣೆಗೆ, ಹೆಬ್ರಿ ಠಾಣೆಯ ಎಸ್ಸೈ ನಿರಂಜನ್ ಹೆಗ್ಡೆ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಠಾಣೆಗೆ, ಶೃಂಗೇರಿ ಠಾಣೆಯ ಎಸ್ಸೈ ಮಹಾಂತೇಶ್ ಜಾಬ ಗೌಡ ಅವರನ್ನು ಹೆಬ್ರಿ ಠಾಣೆಗೆ, ಉಡುಪಿ ಸಂಚಾರ ಠಾಣೆಯ ಎಸ್ಸೈ ಸಕ್ತಿವೇಲು ಅವರನ್ನು ಶಿರ್ವ ಠಾಣೆಗೆ, ಸಿಎಸ್‌ಪಿ ಘಟಕದಿಂದ ಬಿಡುಗಡೆಗೊಂಡು ಪಶ್ಚಿಮ ವಲಯ ಕಚೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಎಸ್ಸೈ ಪುನೀತ್ ಕುಮಾರ್ ಬಿ.ಇ. ಅವರನ್ನು ಉಡುಪಿ ನಗರ ಠಾಣೆಗೆ, ಉಡುಪಿ ಜಿಲ್ಲಾ ಸೆನ್ ಪೊಲೀಸ್ ಠಾಣೆಯ ಎಸ್ಸೈ ಲಕ್ಷ್ಮಣ ಅವರನ್ನು ಅಜೆಕಾರು ಠಾಣೆಗೆ, ಕೋಟ ಠಾಣೆಯ ಎಸ್ಸೈ ಮಧು ಬಿ.ಇ. ಅವರನ್ನು ಶಂಕರನಾರಾಯಣ ಠಾಣೆಗೆ, ಸುಳ್ಯ ಠಾಣೆಯಿಂದ ವರ್ಗಾವಣೆಗೊಂಡು ಸ್ಥಳ ನಿರೀಕ್ಷಣೆಯಲ್ಲಿರುವ ಎಸ್ಸೈ ದಿಲೀಪ್ ಜಿ.ಆರ್ ಅವರನ್ನು ಕಾರ್ಕಳ ಗ್ರಾಮಾಂತರ ಠಾಣೆಗೆ, ಮಲ್ಪೆ ಠಾಣೆಯಿಂದ ವರ್ಗಾವಣೆಗೊಂಡು ಸ್ಥಳ ನಿರೀಕ್ಷಣೆಯಲ್ಲಿರುವ ಎಸ್ಸೈ ಸುಧಾ ಪ್ರಭು ಅವರನ್ನು ಕೋಟ ಠಾಣೆಗೆ, ಹಿರಿಯಡ್ಕ ಠಾಣೆಯಿಂದ ವರ್ಗಾವಣೆಗೊಂಡು ಸ್ಥಳ ನಿರೀಕ್ಷಣೆಯಲ್ಲಿರುವ ಎಸ್ಸೈ ಅನಿಲ್ ಬಿ.ಎಂ. ಅವರನ್ನು ಸಿದ್ಧಾಪುರ ಠಾಣೆಗೆ, ಪಡುಬಿದ್ರೆ ಠಾಣೆಯಿಂದ ವರ್ಗಾವಣೆಗೊಂಡು ಸ್ಥಳ ನಿರೀಕ್ಷಣೆಯಲ್ಲಿರುವ ಎಸ್ಸೈ ಪುರುಷೋತ್ತಮ ಎ. ಅವರನ್ನು ಕಾಪು ಠಾಣೆಗೆ ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News