×
Ad

ಗಂಗಾವತಿ: ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವೈದ್ಯೆಯ ಮೃತದೇಹ ಪತ್ತೆ

Update: 2025-02-20 20:27 IST

ಅನನ್ಯ ಮೋಹನ್ ರಾವ್ (Photo:X)

ಗಂಗಾವತಿ (ಕೊಪ್ಪಳ) : ಸ್ನೇಹಿತರೊಂದಿಗೆ ರಜೆ ಕಳೆಯಲು ಆಗಮಿಸಿ ಈಜಲು ಹೋಗಿ ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋಗಿದ್ದ ಅನನ್ಯ ಮೋಹನ್ ರಾವ್  ಎಂಬ ತೆಲಂಗಾಣದ ಖಾಸಗಿ ಆಸ್ಪತ್ರೆಯ ವೈದ್ಯೆಯ ಮೃತದೇಹ ಇಂದು ( ಗುರುವಾರ) ಪತ್ತೆಯಾಗಿದೆ.

ಹೈದರಾಬಾದ್​​ನ ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯ ಮೋಹನ್​ ರಾವ್ ಎಂಬವರು ರಜೆ ಕಳೆಯಲು ಗಂಗಾವತಿಗೆ ಆಗಮಿಸಿ ನದಿಯಲ್ಲಿ ಈಜುವಾಗ ನೀರಿನ ರಬಸಕ್ಕೆ ಕೊಚ್ಚಿಹೋಗಿದ್ದರು.

16 ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆಯಾಗಿದೆ.

ನಂತರ ನದಿಯ ದಡದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News