×
Ad

ಕನಕಗಿರಿ | ಟಿಪ್ಪರ್-ದ್ವಿಚಕ್ರ ವಾಹನ ನಡುವೆ ಅಪಘಾತ : ಇಬ್ಬರು ಮೃತ್ಯು

Update: 2025-03-18 22:21 IST

ಸಾಂದರ್ಭಿಕ ಚಿತ್ರ

ಕನಕಗಿರಿ : ಟಿಪ್ಪರ್ ಹಾಗೂ ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನವಲಿ ಗ್ರಾಮದ ರೈಸ್ ಟೆಕ್ನಾಲಜಿ ಪಾರ್ಕ್ ಹತ್ತಿರ ನಡೆದಿದೆ.

ಮೃತರನ್ನು ಸಿದ್ದಪ್ಪ ಪ್ಯಾಟಾಳ (34) ಹಾಗೂ ರಮೇಶ ಜವಳಗೇರಾ(27) ಎಂದು ಗುರುತಿಸಲಾಗಿದೆ.

ನವಲಿ ಕಡೆಯಿಂದ ಗುಡೂರುಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಮರಳು ತುಂಬಿದ ಟಿಪ್ಪರ್ ಬೈಕ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಅಡಿಗೆ ಸಿಲುಕಿ ಯುವಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪಿಐ ಎಂ.ಡಿ.ಫೈಜುಲ್ಲಾ ಅವರು ಭೇಟಿ‌ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News