ವಿಜಯೇಂದ್ರ, ಬಿಜೆಪಿಯವರು ಮೋದಿ ಮನೆಯ ಮುಂದೆ ಪ್ರತಿಭಟನೆ ಮಾಡಲಿ: ಸಚಿವ ತಂಗಡಗಿ
ಕೊಪ್ಪಳ: ವಿಜಯೇಂದ್ರ ಅವರು ತುಮಕೂರಲ್ಲಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಮೋದಿ ಮನೆ ಮುಂದೆ ಪ್ರತಿಭಟನೆ ಮಾಡಲಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಕೊಪ್ಪಳದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಅವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ, ಅವರು ಯಾವ ಮುಖ ಇಟ್ಕೊಂಡು ಪ್ರತಿಭಟನೆ ಮಾತಾಡುತ್ತಾರೆ. ಬಿಜೆಪಿಯವರಿಗೆ ಪ್ರತಿಭಟನೆ ಮಾಡೋಕೆ ಯಾವ ನೈತಿಕತೆಯೂ ಇಲ್ಲ, ಅವರಿಗೆ ಸರ್ಕಾರದ ಸಿಸ್ಟಂ ಗೊತ್ತಿಲ್ಲ, ವ್ಯವಸ್ಥೆನೂ ಗೊತ್ತಿಲ್ಲ ಎಂದು ವ್ಯಂಗವಾಡಿದರು.
ಯಾರು ಯೂರಿಯಾ ಸಪ್ಲೈ ಮಾಡೋದು, ರಾಜ್ಯ ಸರ್ಕಾರನಾ...? ಕರ್ನಾಟಕದಲ್ಲಿ ಇದೆಯಾ ...? ಈ ವರ್ಷ ರಾಜ್ಯದಲ್ಲಿ ಒಂದುವರೆ ತಿಂಗಳು ಬೇಗ ಬಿತ್ತನೆ ಆಗಿದ್ದು, ಅಗಸ್ಟ್ ತಿಂಗಳಲ್ಲಿ ಬರಬೇಕಾದ ಕೋಟಾ ಇನ್ನೂ ಇದೆ. ರಾಜ್ಯದ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಅವರು ಮಾಡುತಿದ್ದಾರೆ. ಜನರಿಗೆ ಸುಳ್ಳು ಹೇಳ್ತಿದ್ದಾರೆ. ಬಿಜೆಪಿ ಅವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ ಅವರು ಹೇಳಿದ್ದು ನಂಬಬೇಡಿ ಬಿಜೆಪಿ ಸುಳ್ಳು ಹೇಳಿ ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
ಮಳೆ ಬೇಗ ಆಗಿದೆ, ಯೂರಿಯಾ ಬೇಕು ಅಂತ ವರದಿ ಕೊಟ್ಟರು, ಕೇಂದ್ರ ಸಪ್ಲೈ ಮಾಡಿಲ್ಲ, ರೈತರ ವಿಚಾರದಲ್ಲಿ ರಾಜಕಿಯ ಮಾಡೋದು ಬಿಡಬೇಕು ನಾವು ರೈತರನ್ನ ಪ್ರೀತಿ ವಿಶ್ವಾಸದಿಂದ ಕಾಣ್ತಿವಿ ರೈತರಿಗೆ ಮನವಿ ಮಾಡ್ತೀವಿ, ಒಂದು ದಿನ ಲೇಟ್ ಆದ್ರೂ ರೈತರಿಗೆ ಗೊಬ್ಬರ ಕೊಡ್ತಿವಿ ಎಂದು ಹೇಳಿದರು.