Manvi | ಹುತಾತ್ಮ ಯೋಧ ಅಂಗಡಿ ಮಂಜುನಾಥ್ ನಾಯಕಗೆ ಗೌರವ ನಮನ

Update: 2026-08-08 16:34 IST

ಮಾನ್ವಿ : ಮಣಿಪುರದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಉಗ್ರರ ವಿರುದ್ಧ ಹೋರಾಡಿ 2008ರ ಆಗಸ್ಟ್‌ 7ರಂದು ವೀರಮರಣ ಹೊಂದಿದ ಮಾನ್ವಿ ತಾಲೂಕಿನ ಸಾದಾಪುರ ಗ್ರಾಮದ ಯೋಧ ಅಂಗಡಿ ಮಂಜುನಾಥ್ ನಾಯಕ ಅವರ ಹುತಾತ್ಮ ದಿನಾಚರಣೆಯನ್ನು ಗೌರವ ಪೂಜೆ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ್ ನಾಯಕ್ ಮುಷ್ಟೂರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಂಗಡಿ ಮಂಜುನಾಥ್ ನಾಯಕ ಅವರ ತ್ಯಾಗವನ್ನು ದೇಶದ ಜನತೆ ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯ ಮತ್ತು ದೇಶಪ್ರೇಮ ಮುಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಹುತಾತ್ಮ ಯೋಧರ ತಾಯಿ ಪಾರ್ವತಮ್ಮ ಅಂಗಡಿ, ಸಹೋದರಿ, ಯಲಹಂಕ ಗ್ರೂಪ್ ಸೆಂಟರ್‌ನ ಹಾಲಿ ಯೋಧ ಲಕ್ಷ್ಮಣ ನಾಯಕ್, ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಕಲ್ಲೂರ್, ಮಾನ್ವಿ ತಾಲೂಕಿನ ನಿವೃತ್ತ ಯೋಧರಾದ ತಿಮ್ಮಪ್ಪ ಗುಜ್ಜಲ್, ಹನುಮಂತ ನಸಲಾಪುರ, ತಿಪ್ಪಣ್ಣ ನಾಯಕ ಹರವಿ, ಓಬಣ್ಣ ಚೌಹಾಣ್ ಸುಂಕೇಶ್ವರ, ಮಲ್ಲಪ್ಪ ನಾಯಕ ದೇವಿಪುರ, ಖಾಸಗಿ ಉಪನ್ಯಾಸಕ ಆಂಜನೇಯ ನಸಲಾಪುರ, ಅಂಗಡಿ ಬಸವ ಸಾದಾಪುರ, ಯುವ ಬಳಗದ ಸಂಚಾಲಕ ಮಹೇಶ್ ನಾಯಕ ಬೆಟ್ಟದೂರು ಹಾಗೂ ನರಸಿಂಹ ನಾಯಕ್ ಕರಡಿಗುಡ್ಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News