Raichur | ‘ಹೇಗಿದ್ದೀರಾ’ ಕಿರು ನಾಟಕದ ಮೂಲಕ ಯುವಜನರಿಗೆ ಮಾನಸಿಕ ಆರೋಗ್ಯ ಜಾಗೃತಿ

Update: 2026-08-08 16:32 IST

ರಾಯಚೂರು : ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಹೇಗಿದ್ದೀರಾ’ ಎಂಬ ಕಿರು ನಾಟಕ ಪ್ರದರ್ಶಿಸುವ ಮೂಲಕ ಯುವಜನರಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಯಿತು.

ಅತಿಯಾದ ಮೊಬೈಲ್ ಬಳಕೆ ಹಾಗೂ ಮಾದಕ ವ್ಯಸನಗಳಿಗೆ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಕುಟುಂಬ, ಸಮಾಜ ಹಾಗೂ ಶಿಕ್ಷಣದ ಜೊತೆಗೆ ಉದ್ಯೋಗ, ಪ್ರೀತಿ ಸೇರಿದಂತೆ ಹಲವು ಕಾರಣಗಳಿಂದ ಉಂಟಾಗುವ ಒತ್ತಡವೂ ಯುವಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಾಂಶುಪಾಲ ರವೀಂದ್ರ ಎಸ್. ಬಂಡಿ ಹೇಳಿದರು.

ಸಂವಾದ ಸಂಸ್ಥೆಯು ರಾಜ್ಯಮಟ್ಟದ ಯುವ ಅಭಿಯಾನದ ಭಾಗವಾಗಿ ಕರ್ನಾಟಕದಾದ್ಯಂತ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ‘ಹೇಗಿದ್ದೀರಾ’ ಕಿರು ನಾಟಕ ಪ್ರದರ್ಶಿಸುತ್ತಿದೆ. ಯುವಜನರಲ್ಲಿ ಮಾನಸಿಕ ಒತ್ತಡ, ಖಿನ್ನತೆ ಹಾಗೂ ಆತ್ಮಹತ್ಯೆ ಪ್ರಕರಣಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಿರು ನಾಟಕದ ಮೂಲಕ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸಿದ ಕಲಾವಿದರ ಪ್ರಯತ್ನಕ್ಕೆ ಯುವಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕಲಾವಿದರಾದ ನಂದಿನಿ, ಅಝೀಮ್, ಮನೋಜ್, ನಾಗರಾಜ್, ಕೃಪಾ, ಗಗನ, ಷಣ್ಮುಖ, ಪೂಜಾ, ಅಂಕಿತ, ದೇವಿಕಾ, ಸ್ವಾಮಿ ಹಾಗೂ ಈಶ್ವರ್ ಅಭಿನಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News